Sunday, September 18, 2022

ಅರ್ಚಕರು ತಮ್ಮ ವೃತ್ತಿ ಗೌರವ ಉಳಿಸಿಕೊಳ್ಳಲು ಹೆಚ್ಚಿನ ಗಮನ ನೀಡಿ : ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ

ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಿರಿಯ ನ್ಯಾಯವಾದಿ ವಿ.ಎಚ್ ರಾಘವೇಂದ್ರರಾವ್, ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೮: ಧರ್ಮದ ಬಗ್ಗೆ ಜಾಗೃತಿ ಮೂಡಿಸುವ, ಎಚ್ಚರಿಸುವ ಜೊತೆಗೆ ಸಮಾಜದಲ್ಲಿ ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುವ ಅರ್ಚಕರು ತಾವು ಹೊಂದಿರುವ ಗೌರವ ಸ್ಥಾನಮಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕೆಂದರು. ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ಗೌರವಾಧ್ಯಕ್ಷ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.
    ಅವರು ಭಾನುವಾರ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ರ್ಚಕರ ಹುದ್ದೆ ಸಮಾಜದಲ್ಲಿ ಶ್ರೇಷ್ಠವಾದ ಮತ್ತು ಜವಾಬ್ದಾರಿಯುತವಾದ ಹುದ್ದೆಯಾಗಿದೆ. ಅರ್ಚಕರು ತಮ್ಮದೇ ಆದ ವೈಶಿಷ್ಟತೆಯನ್ನು ಹೊಂದಿದ್ದಾರೆ. ದೇವರ ಸಾಮಿಪ್ಯ ಹೊಂದುವಲ್ಲಿ ಅರ್ಚಕರ ಪಾತ್ರ ಪ್ರಮುಖವಾಗಿದೆ. ಪ್ರಸ್ತುತ ಸಮಾಜದಲ್ಲಿ ಅರ್ಚಕರು ಹೊಂದಿರುವ ಗೌರವ ಸ್ಥಾನಮಾನಗಳನ್ನು ಉಳಿಸಿಕೊಳ್ಳುವ ಜೊತೆಗೆ ಮಹಾಸಭಾ ಬೆಳವಣಿಗೆ ಕೈಜೋಡಿಸಬೇಕು. ಮಹಾಸಭಾ ೧೯ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ೨೦ನೇ ವರ್ಷಕ್ಕೆ ಕಾಲಿಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಕ್ಷೇತ್ರದಲ್ಲಿ ಅರ್ಚಕರ ಸಭಾಭವನ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಮಹಾಸಭಾ ಮುನ್ನಡೆಯುತ್ತಿದ್ದು, ಈ ಕಾರ್ಯ ಮುಂದಿನ ದಿನಗಳಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
    ಹಿರಿಯ ನ್ಯಾಯವಾದಿ ವಿ.ಎಚ್ ರಾಘವೇಂದ್ರರಾವ್ ಮಾತನಾಡಿ, ಸಮಾಜ ಅರ್ಚಕರನ್ನು ಹೊಂದಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಹಿಂದೆ ಋಷಿ-ಮುನಿಗಳು ಈ ನೆಲದಲ್ಲಿ ಕೈಗೊಂಡಿರುವ ತಪಸ್ಸಿನ ಶಕ್ತಿಯಿಂದ ಇಂದು ನಾವೆಲ್ಲರೂ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಬಹುತೇಕ ಜನರ ಎರಡು ಆಯ್ಕೆಗಳು ನ್ಯಾಯ ಮತ್ತು ದೇವರು. ನ್ಯಾಯ ಸಿಗದಿದ್ದಲ್ಲಿ ದೇವರ ಮೊರೆ ಹೋಗುತ್ತಾರೆ. ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿ ಯಾವುದೇ ಧರ್ಮ, ಜಾತಿ, ಲಿಂಗಭೇದಭಾವ, ವಯಸ್ಸಿನ ಭೇದಭಾವವಿಲ್ಲದೆ ಅರ್ಚಕರು ಕಾರ್ಯ ನಿರ್ವಹಿಸುವ ಮೂಲಕ ಎಲ್ಲಾ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಅರ್ಚಕರಿಗೆ ಸಮಜದಲ್ಲಿ ಗೌರವದ ಸ್ಥಾನಮಾನವಿದೆ. ಅರ್ಚಕರು ತಮ್ಮ ವೃತ್ತಿ ಹಾಗು ತಾವು ನಿರ್ವಹಿಸುತ್ತಿರುವ ಸ್ಥಳದ ಪರಂಪರೆ, ಆಚಾರ-ವಿಚಾರ ಎಲ್ಲವನ್ನು ಅರಿತು ಇಂದಿನ ಪೀಳಿಗೆಗೆ ತಿಳಿಸುವ ಹೊಣೆಗಾರಿಕೆ ಹೊಂದಬೇಕಾಗಿದೆ ಎಂದರು.


ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅರ್ಚಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಅರಳಿಹಳ್ಳಿ ಶ್ರೀ ಮುನೇಶ್ವರ ದೇವಸ್ಥಾನದ ಅರ್ಚಕ ಏಳುಮಲೈ ದಂಪತಿ, ಬೈಪಾಸ್ ರಸ್ತೆ ಶ್ರೀ ಶನೈಶ್ವರ ದೇವಸ್ಥಾನದ ಅರ್ಚಕ ಲಕ್ಷ್ಮಣ ದಂಪತಿ, ತಾವರಘಟ್ಟ ಶ್ರೀ ರಂಗನಾಥ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ದಂಪತಿ, ಕಾಗದನಗರದ ಶ್ರೀ ಕ್ವಾಡ್ರಂಗಲ್ ರಾಮಮಂದಿರದ ಎ.ಎನ್ ಸುರೇಶ್ ಹಾಗು ಕಾಗೇಕೋಡಮಗ್ಗಿ ಶ್ರೀ ತಿಮ್ಮಪ್ಪ ದೇವಸ್ಥಾನದ ಶಂಕರ್‌ರಾವ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದ ಅರ್ಚಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಮಹಾಸಭಾ ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಹಿ.ಕೃ ರಂಗನಾಥ್ ಸ್ವರಚಿತ ಕವನ ವಾಚಿಸಿದರು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಜೆ.ಪಿ ಗಣೇಶ್ ಪ್ರಸಾದ್ ಮತ್ತು ಸಹ ಕಾರ್ಯದರ್ಶಿ ಡಿ. ಸಂಜೀವ ಕುಮಾರ್ ನಿರೂಪಿಸಿದರು. ಎಚ್.ಆರ್ ಶ್ರೀಧರೇಶ್ ಭಾರಧ್ವಾಜ್ ಪ್ರಾರ್ಥಿಸಿದರು.  ಉಪಾಧ್ಯಕ್ಷರಾದ ಎಚ್.ಎಸ್ ಮುರಳೀಧರ ಶರ್ಮ, ಕೆ.ಎನ್ ಕಾಂತಯ್ಯ, ಸಹಕಾರ್ಯದರ್ಶಿ ಎಚ್.ಎಸ್ ಬದರಿನಾರಾಯಣ, ಸಂಘಟನಾ ಕಾರ್ಯದರ್ಶಿಗಳಾದ ಎಂ. ಸತೀಶ್ ಭಟ್ರು, ಎಂ. ಸುರೇಶ್, ಖಜಾಂಚಿ ಡಿ.ಯು ಪ್ರಮೋದ್ ಕುಮಾರ್, ನಿರ್ದೇಶಕರಾದ ರಮೇಶ್ ಭಟ್ ತರಳೀಮಠ, ಎಚ್. ಸತೋಷ್‌ಕುಮಾರ್, ಎಚ್.ವಿ ಮಂಜುನಾಥ್, ಎಂ.ವಿ ನಾರಾಯಣ ಮೂರ್ತಿ, ತಿಮ್ಮಯ್ಯ, ಎಲ್. ಶ್ರೀನಿವಾಸ್, ಶಂಕರ್ ಜೋಯ್ಸ್, ನಾಗರಾಜಾಚಾರ್, ಡಿ. ದಿನೇಶ್, ಎನ್.ಎಂ ರವಿಕುಮಾರ್, ಮಹೇಶ ಶರ್ಮ, ವಿದ್ಯಾಶಂಕರ ಶರ್ಮ ಮತ್ತು ಸಿದ್ದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಗಣಪತಿ ಹಾಗು ಸತ್ಯನಾರಾಯಣ ಪೂಜೆ ನೆರವೇರಿತು.


ಭದ್ರಾವತಿ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಗದನಗರದ ಶ್ರೀ ಕ್ವಾಡ್ರಂಗಲ್ ರಾಮಮಂದಿರದ ಎ.ಎನ್ ಸುರೇಶ್ ಸನ್ಮಾನಿಸಿ ಗೌರವಿಸಲಾಯಿತು.

No comments:

Post a Comment