Monday, November 14, 2022

೨೬ನೇ ವರ್ಷದ ಚಿದಂಬರ ಜಯಂತಿ



ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ, ನ. ೧೪ : ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಮುಂಜಾನೆ ಕಾಕಡಾರತಿ ನಡೆಸಿ ನಂತರ ಶ್ರೀ ರಾಮೇಶ್ವರ ದೇವರಿಗೆ ಅಭಿಷೇಕ, ಈಶ್ವರ ದೇವರಿಗೆ ರುದ್ರಾಭಿಷೇಕ, ರುದ್ರವೇದಮಂತ್ರ ಜರುಗಿತು. ದೇವರಿಗೆ ವಿಶೇಷ ಅಲಂಕಾರ ಕೈಗೊಂಡ ನಂತರ ಚಿದಂಬರರ ಭಾವಚಿತ್ರ ಪುಷ್ಪಾಲಂಕೃತ ಅಡ್ಡಪಲ್ಲಿಕ್ಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ಪುರಾಣಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೂ ಉತ್ಸವ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಉತ್ಸವ ಮೆರವಣಿಗೆ ಪುನಃ ಇದೆ ಮಾರ್ಗದಲ್ಲಿ ಹಿಂದಿರುಗಿ ದೇವಸ್ಥಾನ ತಲುಪಿತು.  
    ನಂತರ ಪಂಡಿತರಾದ ಪ್ರಕಾಶ ಮತ್ತು ಸೋಮಯಾಜಿಯವರಿಂದ ಚಿದಂಬರರ ಕುರಿತಂತೆ ಉಪನ್ಯಾಸ ನಡೆಯಿತು. ದೇವರಿಗೆ, ಗುರುಗಳಿಗೆ ಮಹಾಮಂಗಳಾರತಿ, ತೊಟ್ಟಿಲು ಪೂಜೆ ನಡೆಸಿ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು
    ಸಮಿತಿ ಅಧ್ಯಕ್ಷ ದೇಶಪಾಂಡೆ, ಇಂದ್ರಸೇನ, ಜೆ.ಎನ್ ಆನಂದರಾವ್, ಸಿ.ಕೆ ರಾಮಣ್ಣ, ಮಂಜುನಾಥ್, ರಮಾಕಾಂತ, ಗಾಯತ್ರಿ, ಶೋಭ, ಗೀತಾ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

No comments:

Post a Comment