Tuesday, December 13, 2022

ಹಿರಿಯ ಲೆಕ್ಕ ಪರಿಶೋಧಕ ಶ್ರೀಪಾದ್ ವಿಧಿವಶ


ಹಿರಿಯ ಲೆಕ್ಕಪರಿಶೋಧಕ ಶ್ರೀಪಾದ್
    ಭದ್ರಾವತಿ, ಡಿ. ೧೪: ನಗರದ ಹಿರಿಯ ಲೆಕ್ಕ ಪರಿಶೋಧಕ, ಹೊಸಮನೆ ಹಳೇಸಂತೆ ಮೈದಾನದ ರಸ್ತೆ ನಿವಾಸಿ ಶ್ರೀಪಾದ್(೫೯) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.  
ಪತ್ನಿ, ಇಬ್ಬರು ಸಹೋದರರನ್ನು ಹೊಂದಿದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು    ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.
    ಇವರ ಅಂತ್ಯ ಸಂಸ್ಕಾರ ಸಂಜೆ ನಡೆಯಲಿದೆ. ೩-೪ ದಶಕಗಳಿಂದ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಭದ್ರಾವತಿ, ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಜೀವಮಾನದುದ್ದಕ್ಕೂ ಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುತ್ತಾ, ಮಠ ಮಂದಿರಗಳಿಗೆ ದಾನ, ಧರ್ಮ ಮಾಡುತ್ತಿದ್ದ ಶ್ರೀಪಾದ್ ಅವರು ಎಂದಿಗೂ ತಮ್ಮ ಈ ಸೇವೆಯ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ.
    ಪ್ರಮುಖವಾಗಿ, ಕೊರೋನಾದಿಂದಾಗಿ ಮೃತಪಟ್ಟ ಬಹಳಷ್ಟು ಮಂದಿಯ ಶವಸಂಸ್ಕಾರಕ್ಕೆ ಇವರು ನೀಡಿದ ನೆರವು ಬಹುತೇಕ ಮಂದಿಗೆ ತಿಳಿದಿಲ್ಲ. ತಮ್ಮ ವೃತ್ತಿ ಕ್ಷೇತ್ರದ ಹೊರತಾಗಿ ಧರ್ಮ, ಅಧ್ಯಾತ್ಮ, ವೇದಾಧ್ಯಯ, ಮಾಧ್ವ ಸಂಪ್ರದಾಯದ ಹಲವು ಪಾಠಗಳನ್ನು ಇಂದಿಗೂ ಇವರು ಅಭ್ಯಾಸ ಮಾಡುತ್ತಾ, ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.

No comments:

Post a Comment