ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕರಾವಳಿ ಬದುಕು ಅನಾವರಣ.
ಭದ್ರಾವತಿ, ಡಿ. ೧೩: ಒಂದೆಡೆ ತಮ್ಮ ಪ್ರತಿಭೆ ಅನಾವರಣಗೊಳಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಬೇಕೆಂಬ ತವಕ. ಮತ್ತೊಂದೆಡೆ ಮಕ್ಕಳ ಪ್ರತಿಭೆಯನ್ನು ನೋಡಲು ಕಾತುರದಿಂದ ಕಾಯುವ ಕ್ಷಣ ಮಂಗಳವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕಂಡು ಬಂದಿತು.
ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ೭ ತಾಲೂಕುಗಳಿಂದ ಸುಮಾರು ೪೦೦ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಒಟ್ಟು ೧೮ ವಿಭಾಗದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಮತ್ತು ಉರ್ದು ಕಂಠಪಾಠ ಹಾಗು ಭಾಷಣ, ಗಝಲ್, ಕವಾಲಿ, ಜಾನಪದ ನೃತ್ಯ, ಮಿಮಿಕ್ರಿ, ಜಾನಪದ ಗೀತೆ ಮತ್ತು ಭಾವಗೀತೆ, ರಸಪ್ರಶ್ನೆ, ಸಂಸ್ಕೃತ ಧಾರ್ಮಿಕ ಪಠಣ, ಆಶುಭಾಷಣ ಸ್ಪರ್ಧೆ, ಅಭಿನಯಗೀತೆ & ಕಥೆ ಹೇಳುವುದು, ಅರೇಬಿಕ್ ಧಾರ್ಮಿಕ ಪಠಣ, ಭರತ್ಯನಾಟ್ಯ, ಹಾಸ್ಯ, ಲಘು ಸಂಗೀತ ಮತ್ತು ಭಕ್ತಿಗೀತೆ, ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು ಹಾಗು ರಂಗೋಲಿ ಸೇರಿದಂತೆ ವೈಯಕ್ತಿಕ ಹಾಗು ಸಾಮೂಹಿಕ ಸ್ಪರ್ಧೆಗಳು ನಡೆದವು.
ಕರಾವಳಿ ಜನರ ಬದುಕು ಅನಾವರಣ :
ವಿಶೇಷ ಎಂದರೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳು ಕರಾವಳಿ ಬದುಕನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ದೋಣಿ, ಜೇಡ, ಜ್ಞಾನ ಧೈಯ್ಯ ಫಲಕ ರಾರಾಜಿಸುತ್ತಿತ್ತು. ಇದರ ಜೊತೆಗೆ ಯಕ್ಷಗಾನ ಕಲೆ ಅನಾವರಣ ಸಹ ಕಂಡು ಬಂದಿತು.
ಮಣ್ಣಿನಲ್ಲಿ ಅರಳಿದ ಪ್ರಾಣಿ, ಪಕ್ಷಿಗಳು:
ಈ ನಿಟ್ಟಿನಲ್ಲಿ ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು. ಮಕ್ಕಳಲ್ಲಿ ವಿಭಿನ್ನ ರೀತಿಯ ಕಲೆಗಳಿದ್ದು, ಅವುಗಳ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿರುತ್ತದೆ ಎಂಬುದು ಕಂಡು ಬಂದಿತು.
ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು.
ರಾರಾಜಿಸಿದ ಕಾವೇರಿ ಮಾತೆ :
ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು. ಕನ್ನಡ ನೆಲ, ಜಲ, ಭಾಷೆ ಸಹ ಇದರೊಂದಿಗೆ ಅನಾವರಣಗೊಂಡಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಬಸವಂತರಾವ್ ದಾಳೆ, ಯು. ಮಹಾದೇವಪ್ಪ, ಶಿಕ್ಷಕರಾದ ಎಂ.ಆರ್ ರೇವಣಪ್ಪ, ಧನಂಜಯ ಸೇರಿದಂತೆ ಇನ್ನಿತರರು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
ಉಳಿದಂತೆ ಬಾಲಕಿಯರ ವೀರಭದ್ರೇಶ್ವರ ನೃತ್ಯ, ಡೊಳ್ಳು ಕುಣಿತ, ಜಾನಪದ ನೃತ್ಯ, ಲಂಬಾಣಿ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳ ನೃತ್ಯಗಳು ವೇದಿಕೆ ಮತ್ತಷ್ಟು ಮೆರಗು ತಂದುಕೊಟ್ಟವು.
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಂಪೂರ್ಣ ಯಶಸ್ವಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚಿನ ಶ್ರಮ ವಹಿಸಿತ್ತು.
ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವೀರಭದ್ರೇಶ್ವರ ನೃತ್ಯ
No comments:
Post a Comment