Thursday, February 9, 2023

ಫೆ.೧೨ರಂದು ಅವಧೂತರು-ಒಂದು ಅವಲೋಕನ

    ಭದ್ರಾವತಿ, ಫೆ. ೯ : ಸಿದ್ದಾರೂಢನಗರದ ಸಂಸ್ಕೃತಿ ಸೌರಭ ವತಿಯಿಂದ ಫೆ.೧೨ರಂದು ಸಂಜೆ ೬ ಗಂಟೆಗೆ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಆಧ್ಯಾತ್ಮ ಸೌರಭ ಅವಧೂತರು-ಒಂದು ಅವಲೋಕನ(ಅವಧೂತ ಸ್ಥಿತಿ ಮತ್ತು ಅಜ್ಞಾನ ಅವಧೂತರು ಕುರಿತ ಚಿಂತನ ಕಾರ್ಯಕ್ರಮ) ಹಮ್ಮಿಕೊಳ್ಳಲಾಗಿದೆ.
    ಚಿತ್ರದುರ್ಗ ಹಿರಿಯೂರಿನ ಸಾಹಿತಿ, ಶ್ರೀ ದತ್ತ ಆರಾಧಕರಾದ ಕಣಜನಹಳ್ಳಿ ನಾಗರಾಜ್ ಉಪನ್ಯಾಸ ನೀಡಲಿದ್ದು, ಸಂಸ್ಕೃತಿ ಸೌರಭ ಅಧ್ಯಕ್ಷ ಎಚ್.ಎನ್ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.

No comments:

Post a Comment