ಭದ್ರಾವತಿ, ಮಾ.3: ತಾಲೂಕಿನ ಶ್ರೀ ಹಿರೇಮಠ ಬಿಳಿಕಿ ಟ್ರಸ್ ವತಿಯಿಂದ ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ ಅಂಗವಾಗಿ ಮಾ.4ರಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯ ದೇವತಾ ಕಾರ್ಯ ಹಾಗೂ ಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಮಹಾದ್ವಾರದಿಂದ ಮುತ್ತೈದೆಯರು, ಕಳಸ, ಕನ್ನಡಿ, ಮಂಗಳವಾದ್ಯ ಹಾಗೂ ವೀರಗಾಸೆಯೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ರಾಜಬೀದಿ ಉತ್ಸವ ನೆರವೇರಲಿದ್ದು, ಭಕ್ತರು ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
No comments:
Post a Comment