Wednesday, March 8, 2023

ಬಾರ್ ಮುಂಭಾಗ ನಿಂತಿದ್ದ ಇಬ್ಬರ ಮೇಲೆ ಹಲ್ಲೆ : ದೂರು ದಾಖಲು

    ಭದ್ರಾವತಿ, ಮಾ. ೮ : ಬಾರ್‌ನಲ್ಲಿ ಊಟ ಮುಗಿಸಿಕೊಂಡು ಮಾತನಾಡುತ್ತಾ ಹೊರಗಡೆ ನಿಂತಿದ್ದಾಗ ಇಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಜೇಡಿಕಟ್ಟೆ ನಿವಾಸಿ ರವೀಂದ್ರ ಪ್ರಸಾದ್ ಮತ್ತು ವರಣ್ ಇಬ್ಬರು ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ಬ್ಲೂಬಲ್ ಬಾರ್‌ಗೆ ಹೋಗಿದ್ದು, ಊಟ ಮುಗಿಸಿ ಹೊರಗಡೆ ಮಾತನಾಡುತ್ತಾ ನಿಂತಿದ್ದಾಗ ಬಾರ್‌ನಲ್ಲಿದ್ದ ಸೈಯದ್ ಇಮ್ರಾನ್, ನಯಾಜ್ ಸೇರಿದಂತೆ ಇನ್ನಿತರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ವರುಣ್ ಚಿಕಿತ್ಸೆಗಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments:

Post a Comment