ಭದ್ರಾವತಿ, ಮಾ. ೮ : ತಾಲೂಕಿನ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಮಾ.೯ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ, ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ ಅಷ್ಟಾವದಾನ ಸೇವೆ, ಶಯನೋತ್ಸವ, ೧೦ರಂದು ಸಂಜೆ ರಾಜಬೀದಿ ಉತ್ಸವ, ೧೧ರಂದು ಕಲಾ ತತ್ವ ಹೋಮ, ಕುಂಭಾಭಿಷೇಕ ಮತ್ತು ಮಂಗಳಾರತಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾರಥೋತ್ಸವ ಯಶಸ್ವಿಗೊಳಿಸಲು ದೇವಾಲಯ ಸಮಿತಿ ಕೋರಿದೆ.
No comments:
Post a Comment