Saturday, March 4, 2023

ಎನ್‌ಡಿಪಿಎಸ್ ಪ್ರಕರಣ : ಇಬ್ಬರಿಗೆ ೬ ತಿಂಗಳ ಕಠಿಣ ಕಾರಾವಾಸ ಶಿಕ್ಷೆ


    ಭದ್ರಾವತಿ, ಮಾ. ೪ : ಎನ್‌ಡಿಪಿಎಸ್ ಪ್ರಕರಣದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ೬ ತಿಂಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ೧೦ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
    ಇಮ್ರಾನ್‌ಪಾಷಾ(೨೨) ಮತ್ತು ಸೈಯದ್ ರೋಷನ್(೩೮) ಶಿಕ್ಷೆಗೊಳಗಾಗಿದ್ದು, ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್. ಯತೀಶ್ ಆರೋಪ ದೃಡಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಚ್ ರಂಗಪ್ಪ ವಾದ ಮಂಡಿಸಿದ್ದರು.

No comments:

Post a Comment