Thursday, April 20, 2023

ವಿಧಾನಸಭೆ ಚುನಾವಣೆ : ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ

ಸಂವಿಧಾನದ ಆಶಯದಂತೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸಿ : ಡೇವಿಡ್ ಸಿಮೆಯೋನ್

ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಮಾತನಾಡಿದರು.
    ಭದ್ರಾವತಿ, ಏ. ೨೦ : ಈ ಬಾರಿ ಚುನಾವಣೆಯನ್ನು ಇದೊಂದು ಐತಿಹಾಸಿಕ ಚುನಾವಣೆ ಅನ್ನುವುದರ ಬದಲು ಇದೊಂದು ಬಡವ-ಬಲ್ಲಿದರ ಅರ್ಥಾತ್ ಬಂಡವಾಳ ಶಾಹಿಗಳ-ಬಡವರ ಮಧ್ಯದ ಹೋರಾಟ. ಅಂದರೆ ಸುಮಾರು ೫೦೦ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ವಿಧಾನಸಭೆ ಚುನಾವಣೆ ರಾಜಕೀಯ ಪಕ್ಷಗಳ ರಾಜಕೀಯ ನೀತಿ ನಿರೂಪಣೆಗಳ ಪರೀಕ್ಷೆಯ ಚುನಾವಣೆಯಾಗಲಿದೆ. ೨೦೨೪ರ ಲೋಕಸಭಾ ಚುನಾವಣೆಗೆ ಇದೊಂದು ದಿಕ್ಸೂಚಿಯಾಗುವುದರಿಂದಾಗಿ ಇದಕ್ಕೆ ಎಲ್ಲಿಲ್ಲದ ಮಹತ್ವ ಎಂದರು.
    ಭಾರತೀಯ ಜನತಾ ಪಕ್ಷ(ಭಾಜಪ) ರಾಷ್ಟ್ರೀಯ ಸ್ವಯಂ ಸೇವಕದ ರಾಜಕೀಯ ಪಕ್ಷವಾಗಿದೆ. ಇದರ ನಿಲುವು, ನೀತಿ-ಸಿದ್ದಾಂತ ಬಂಡವಾಳ ಶಾಹಿಗಳ ಅನುಷ್ಠಾನವಾಗಿದೆ. ಈ ಹಿನ್ನಲೆಯಲ್ಲಿ ಕಳೆದ ೭-೮ ವರ್ಷಗಳಲ್ಲಿ ಸಾರ್ವಜನಿಕ ಉದ್ಯಮಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಕಾಲಕ್ರಮೇಣ ಖಾಸಗೀಕರಣವಾಗುತ್ತಿರುವುದು ಸರ್ವವಿಧಿತ ಎಂದು ಆರೋಪಿಸಿದರು
    ಭಾರತೀಯ ಜನತಾ ಪಕ್ಷದ ರಾಜಕೀಯ ನಿಲುವುಗಳು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿರುವ ತುಳಿತಕ್ಕೆ ಒಳಗಾದವರ ಮೀಸಲಾತಿ, ಕಲ್ಯಾಣ ರಾಜ್ಯದ ಪರಿಕಲ್ಪನೆಗಳಿಗೆ, ವಾಕ್ ಸ್ವಾತಂತ್ರ್ಯಕ್ಕೆ ತದ್‌ವಿರುದ್ಧ ನಿಲುವು  ಹೊಂದಿದೆ ಎಂದು ದೂರಿದರು.
    ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜಕೀಯ ನಿಲುವು ಕಮ್ಯೂನಿಸ್ಟ್ ಪಕ್ಷಗಳಂತೆ  ಇದು ಎಡ ಪಂಥಿಯವೂ ಅಲ್ಲ ಹಾಗು ಬಂಡವಾಳಶಾಯಿಗಳಂತೆ ಬಲಪಂಥೀಯವೂ ಅಲ್ಲ. ಅಂದರೆ ಇವೆರಡರ ಮಧ್ಯದ ನಿಲುವು ಸ್ಪಷ್ಟವಾಗಿರುವುದರಿಂದಾಗಿ ಸಾರ್ವಜನಿಕ ಉದ್ಯಮಗಳ ಸ್ಥಾಪನೆಗಳಾದವು. ಕೃಷಿ ಕ್ಷೇತ್ರದಲ್ಲಿ ಉಳುವವನೇ ಒಡೆಯನೆಂಬ ನಿಲುವು ಹೀಗೆಯೇ ಹತ್ತಾರು ಯೋಜನೆಗಳು ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸಂವಿಧಾನದ ಮೂಲ ಸ್ವರೂಪದಂತೆ ರಚನೆಯಾದವು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಅಗತ್ಯವಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಅಂತೋಣಿ ವಿಲ್ಸನ್ ಮತ್ತು ವಿಲ್ಸನ್ ಬಾಬು ಉಪಸ್ಥಿತರಿದ್ದರು.

No comments:

Post a Comment