Tuesday, April 25, 2023

ಮತದಾನ ಜಾಗೃತಿ : ಗೋಡೆ ಬರವಣಿಗೆ ಅಭಿಯಾನಕ್ಕೆ ಚಾಲನೆ

ಭದ್ರಾವತಿ ಕಾಗದನಗರದ ಗುರು ಬ್ರದರ್ ಆರ್ಟ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮತದಾನ ಕುರಿತು ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನಕ್ಕೆ ಮಂಗಳವಾರ ತಹಸೀಲ್ದಾರ್ ಸುರೇಶ್ ಆಚಾರ್ ಚಾಲನೆ ನೀಡಿದರು.
    ಭದ್ರಾವತಿ, ಏ. ೨೫: ಕ್ಷೇತ್ರದಾದ್ಯಂತ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕಾಗದ ನಗರದ ಗುರು ಬ್ರದರ್ ಆರ್ಟ್ಸ್ ವತಿಯಿಂದ ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನ ಕೈಗೊಳ್ಳಲಾಗಿದೆ.
    ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನದ ಮೂಲಕ ಮತದಾನ ಹೆಚ್ಚಿಸುವ ಆಶಯ ಗುರು ಬ್ರದರ‍್ಸ್ ಆರ್ಟ್ಸ್ ಹೊಂದಿದ್ದು, ಮಂಗಳವಾರ ಸಂಜೆ ಕಾಗದನಗರದ ಚೌಡೇಶ್ವರಿ ದೇವಸ್ಥಾನ ಸಮೀಪದ ಬಯಲು ರಂಗಮಂದಿದಲ್ಲಿ ಅಭಿಯಾನಕ್ಕೆ ತಹಸೀಲ್ದಾರ್ ಸುರೇಶ್ ಆಚಾರ್ ಚಾಲನೆ ನೀಡಿದರು.


    ಬಿ. ಗುರು, ಅಶೋಕ್, ಹರೀಶ್ ಕುಮಾರ್, ಮಹಮದ್ ರಫಿ, ಜಿ. ರವಿಕುಮಾರ್, ಸತೀಶ್, ಶಿವಲಿಂಗೇಗೌಡ, ಕೆ. ಶಿವರಾಜು, ನಟರಾಜ್,  ಶಂಕರ್ ಲಿಂಗೇಗೌಡ , ಕೆ.ಎಸ್ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಈ ಹಿಂದೆ ಮಹಾಮಾರಿ ಕೊರೋನಾ ಸಂದರ್ಭದಲ್ಲೂ ಗುರು ಬ್ರದರ‍್ಸ್ ಆರ್ಟ್ಸ್ ವತಿಯಿಂದ ಗೋಡೆ ಬರವಣಿಗೆ ಅಭಿಯಾನ ಹಾಗು ರಸ್ತೆಗಳ ಮೇಲೆ ಬೃಹತ್ ಕೊರೋನಾ ರಂಗು ರಂಗಿನ ಚಿತ್ತಾರಗಳ ಮೂಲಕ ಅಭಿಯಾನ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಾಗಿತ್ತು.

No comments:

Post a Comment