Thursday, April 27, 2023

ವಿಧಾನಸಭಾ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಿಂದ ಗ್ರಾಮಾಂತರ ಭಾಗದಲ್ಲಿ ಅಬ್ಬರದ ಪ್ರಚಾರ

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
    ಭದ್ರಾವತಿ, ಏ. ೨೭ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಳೆದ ೩-೪ ದಿನಗಳಿಂದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಅದ್ದೂರಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಅವರಿಗೆ ಆರತಿ ಬೆಳಗುವ ಮೂಲಕ ಅದ್ದೂರಿ ಸ್ವಾಗತ ಕೋರುತ್ತಿರುವುದು ಕಂಡು ಬರುತ್ತಿದೆ.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಜನ ಬೆಂಬಲ ಹೊಂದುವ ಜೊತೆಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಸ್ಮರಿಸಿಕೊಳ್ಳುವ ಜೊತೆಗೆ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಯವರಿಗೆ ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಪ್ರತಿಯಾಗಿ ಶಾರದ ಅಪ್ಪಾಜಿ ಗ್ರಾಮಸ್ಥರು ತೋರುತ್ತಿರುವ ಪ್ರೀತಿಗೆ ಚಿರಋಣಿ ವ್ಯಕ್ತಪಡಿಸುವ ಮೂಲಕ ಮತಯಾಚಿಸುತ್ತಿದ್ದಾರೆ.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೊಮ್ಮೇನಹಳ್ಳಿ, ಬೊಮ್ಮೇನಹಳ್ಳಿ ಹೊಸ ಬಡಾವಣೆ, ಕಾರೇಹಳ್ಳಿ, ಕೆಂಪೇಗೌಡನಗರ, ಬಾರಂದೂರು, ಕುಂಬಾರಗುಂಡಿ, ಹಳೇಬಾರಂದೂರು, ಬಾರಂದೂರು(ಬಿ.ಎಚ್ ರಸ್ತೆ), ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಕಾಳಿಂಗಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ನೀರುಗುಂಡಿ-ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಹಡ್ಲಘಟ್ಟ, ಶಿವಪುರ, ಶ್ರೀನಿವಾಸಪುರ, ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಎರೇಹಳ್ಳಿ, ಭೋವಿಕಾಲೋನಿ, ಗಾಂಧಿನಗರ ತಾಷ್ಕೆಂಟ್‌ನಗರ, ಎರೇಹಳ್ಳಿ, ಮೊಸರಹಳ್ಳಿ, ಬಸಾಪುರ, ಗುಣಿ ನರಸೀಪುರ, ಮಾರತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ದೇವರನರಸಿಪುರ, ಮೈಸೂರಮ್ಮನ ಕ್ಯಾಂಪ್, ಕಾಚಗೊಂಡನಹಳ್ಳಿ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ರಂಗನಾಥಪುರ, ಬಿಸಿಲುಮನೆ, ಸಿಕಂದರ್ ಕ್ಯಾಂಪ್, ಬಾಳೇಕಟ್ಟೆ, ದೊಡ್ಡೇರಿ, ನೆಟ್ಟಕಲ್ಲಹಟ್ಟಿ, ಗಂಗೂರು, ಶಿವಾಜಿಕ್ಯಾಂಪ್, ಉದಯನಗರ, ಬದನೆಹಾಳ್, ಬಂಡಿಗುಡ್ಡ, ಬೆಳ್ಳಿಗೆರೆ, ಸಾಬರಹಟ್ಟಿ, ಭೈರವನ ಕ್ಯಾಂಪ್, ನಂಜಾಪುರ, ಹೊಸ ನಂಜಾಪುರ, ಹಿರಿಯೂರು, ಹಳೇ ಹಿರಿಯೂರು, ಬಾಳೆ ಮಾರನಹಳ್ಳಿ, ಲಕ್ಷ್ಮೀಸಾಗರ-ರಬ್ಬರ್‌ಕಾಡು, ಸುಲ್ತಾನ್ ಮಟ್ಟಿ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ತಾರೀಕಟ್ಟೆ, ಅರಳಿಕೊಪ್ಪ, ಕಾಳನಕಟ್ಟೆ, ಸಿದ್ದರಹಳ್ಳಿ, ಕಂಬದಾಳ್ ಹೊಸೂರು-ಹೊನ್ನಹಟ್ಟಿ, ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್, ಹುಳಿಯಾರು ರಾಮೇನಕೊಪ್ಪ ಮತ್ತು ಸಂಕ್ಲಿಪುರ ಸೇರಿದಂತೆ ಇನ್ನಿತರ ಗ್ರಾಮಾಂತರ ಪ್ರದೇಶಗಳಲ್ಲಿ  ಕಳೆದ ೩-೪ ದಿನಗಳಿಂದ ಮತಯಾಚನೆ ನಡೆಸಿದ್ದಾರೆ.
    ಶಾರದ ಅಪ್ಪಾಜಿಯೊಂದಿಗೆ ಪಕ್ಷದ ಹಿರಿಯರು, ಮಹಿಳೆಯರು, ಯುವಕರು ಸಹ ಕೈಜೋಡಿಸಿದ್ದು, ಮತಯಾಚನೆ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಆಶಯದೊಂದಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಕಂಡು ಬರುತ್ತಿದೆ.

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

    ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಇಲ್ಲದೆ ಚುನಾವಣೆ ಎದುರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಈ ಬಾರಿ ಅಪ್ಪಾಜಿ ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಪ್ರತಿಷ್ಠೆ ಚುನಾವಣೆಯಾಗಿದೆ. ಹಣದ ಮುಂದೆ ಸ್ವಾಭಿಮಾನ ಗೆಲ್ಲಬೇಕಾಗಿದೆ ಶಾರದ ಅಪ್ಪಾಜಿ ಹೇಳಿದರು.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ಕ್ಷೇತ್ರದ ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್ ಸೇರಿದಂತೆ ಇನ್ನಿತರ ಗ್ರಾಮಾಂತರ ಭಾಗದಲ್ಲಿ ಗುರುವಾರ ಮತಯಾಚನೆ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ದೀನದಲಿತರು, ಬಡವರು, ಶೋಷಿತರ ಪರವಾಗಿ ಧ್ವನಿಯಾಗಿದ್ದರು. ಸದಾ ಕಾಲ ಜನರ ಸೇವೆಯಲ್ಲಿ ತೊಡಗಿದ್ದರು. ಅವರ ದಾರಿಯಲ್ಲಿ ನಾನು ಸಹ ಸಾಗುವ ಭರವಸೆ ನೀಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಆಶಯ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಹಣ ಬಲದ ಮುಂದೆ ಸ್ವಾಭಿಮಾನ ಗೆಲ್ಲಬೇಕು. ಅಪ್ಪಾಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಮುಖಂಡರಾದ ಕರಿಯಪ್ಪ, ಎನ್. ಕೃಷ್ಣಪ್ಪ, ತಿಮ್ಮೇಗೌಡ, ತ್ಯಾಗರಾಜ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

No comments:

Post a Comment