Thursday, July 20, 2023

೧೨೫ಕ್ಕೆ ೧೨೫ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

ಜು.೨೪ರೊಳಗಾಗಿ ಮಾಹಿತಿ ನೀಡಲು ಕಸಾಪ ಮನವಿ 


    ಭದ್ರಾವತಿ, ಜು. ೨೦ : ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡ ಪ್ರಥಮ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲು ತೀರ್ಮಾನಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮಾಹಿತಿ ನೀಡುವಂತೆ ಕೋರಲಾಗಿದೆ.
    ಅಂಕಪಟ್ಟಿಯ ನಕಲು ಪ್ರತಿ ಹಾಗು ಒಂದು ಭಾವಚಿತ್ರ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಡಿ. ನಾಗೋಜಿರಾವ್‌, ಮೊ: ೯೪೪೮೩೩೭೪೨೨ ಮತ್ತು ಬಿ. ಪ್ರಕಾಶ್‌, ಮೊ: ೯೯೪೪೧೬೨೬೭೭ ಸಂಖ್ಯೆಗೆ ಜು.೨೪ರೊಳಗಾಗಿ ವ್ಯಾಟ್ಸಫ್‌ ಮಾಡಿ ಮಾಹಿತಿ ನೀಡುವಂತೆ ಕಾರ್ಯದರ್ಶಿ ಎಚ್. ತಿಮ್ಮಪ್ಪ ಮನವಿ ಮಾಡಿದ್ದಾರೆ. 

No comments:

Post a Comment