Sunday, September 3, 2023

ಗಾಣಿಗ ಸಮಾಜದ ಬೆಳವಣಿಗೆಗೆ ಸಂಘಟಿತರಾಗಿ : ಬಿ.ಕೆ.ಮೋಹನ್

ಭದ್ರಾವತಿಯಲ್ಲಿ ತಾಲೂಕು ಗಾಣಿಗರ ಸಂಘದ ವತಿಯಿಂದ ಹೊಸ ಬುಳ್ಳಾಪುರದಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಪೂಜೆಯ ವೇಳೆ ದೀಪ ಬೆಳಗುವಲ್ಲಿ ಗಾಣಿಗ ಸಮಾಜದ ಕೊಡುಗೆ ಅಪಾರವಾಗಿದ್ದು, ಈ ಸಮಾಜ ಎಲ್ಲಾ ರೀತಿಯಿಂದಲೂ ಶಕ್ತಿಯುತವಾಗಿ ಬೆಳೆಯಬೇಕಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಹೇಳಿದರು.
ತಾಲೂಕು ಗಾಣಿಗರ ಸಂಘದ ವತಿಯಿಂದ ಹೊಸ ಬುಳ್ಳಾಪುರದಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗಾಣಿಗ ಸಮಾಜದ ಕಸುಬು ಪವಿತ್ರವಾದದ್ದು. ಈ ಸಮಾಜದಲ್ಲಿ ಶ್ರೀಮಂತರಿಲ್ಲದಿದ್ದರೂ, ಜನರ ನಡುವೆ ಪ್ರೀತಿ-ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಈ ಸಮಾಜ ಶಕ್ತಿಯುತವಾಗಬೇಕಿದೆ ಎಂದರು.
    ರಾಜಕೀಯ ಬೇರೆ, ಸಮಾಜದ ಕಾರ್ಯಕ್ರಮ ಬೇರೆ. ಸಮಾಜ ಬಾಂಧವರು ಸಮಾಜದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜವನ್ನು ಬಲಪಡಿಸಬೇಕೆಂದರು.
    ಶ್ರೀ ಅನಂತಾನಂದ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗಾಣಿಗ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್, ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ವರದರಾಜ್, ಉಪಾಧ್ಯಕ್ಷರಾದ ರಾಮಶೆಟ್ಟರು, ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್, ಸಹ ಕಾರ್ಯದರ್ಶಿ ಕೆ. ಶಾಂತಕುಮಾರ್, ಖಜಾಂಚಿ ಚಂದ್ರು, ತ್ಯಾಗರಾಜ್, ಕಾರ್ಯಾಧ್ಯಕ್ಷರಾದ ಆರ್. ಬಸವರಾಜ್, ಶಿವಕುಮಾರ್, ಮೋಹನ್ ಕುಮಾರ್, ರಾಜು, ಕಂಚಯ್ಯ, ಸಂಘಟನಾ ಕಾರ್ಯದರ್ಶಿ ವರದರಾಜು, ಯೋಗೇಶ್ ಕೆಂಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

No comments:

Post a Comment