ಭದ್ರಾವತಿ: ನಗರದ ಬಿ.ಎಎಚ್ ರಸ್ತೆ ಮೀನುಗಾರರ ಬೀದಿ ಬಳಿ ಅಂಗಡಿಯೊಂದರ ಸಮೀಪ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ.
ಬಸವರಾಜ್ ಎಂಬುವರು ಆ.15ರಂದು ಮೀನುಗಾರರ ಬೀದಿ ಬಳಿ ಇರುವ ಮೆಡ್ ಪ್ಲಸ್ ಅಂಗಡಿ ಹತ್ತಿರ ಸಂಜೆ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಹೊಗಿದ್ದು, ಪುನಃ ಹಿಂದಿರುಗಿ ಬಂದು ನೋಡಿದಾಗ ವಾಹನ ಕಳುವಾಗಿರುವುದು ಕಂಡು ಬಂದಿದೆ.
ಈ ಸಂಬಂಧ ಸೆ.1ರಂದು ತಡವಾಗಿ ನ್ಯೂಟೌನ್ ಪೊಲೀಸ್ ಠಾಣೆಗೆ ಬಸವರಾಜ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment