Tuesday, September 19, 2023

ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಗಣೇಶ

 


ಭದ್ರಾವತಿ ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

    ಭದ್ರಾವತಿ: ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

    ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಬಾಲ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ. ಹಲವಾರು ವರ್ಷಗಳಿಂದ ಸಮಿತಿವತಿಯಿಂದ ವಿಭಿನ್ನ ರೀತಿಯ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅಲ್ಲದೆ ಹಲವಾರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

No comments:

Post a Comment