ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.
ಸಾವಿರಾರು ಕುಟುಂಬಗಳಿಗೆ ಅನ್ನದಾತವಾಗಿರುವ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ಸುಮಾರು 9 ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ವಿಭಿನ್ನ ರೀತಿಯ ಹೋರಾಟಗಳು ಸಹ ನಡೆದಿವೆ. ಇದೀಗ ನ್ಯೂಕಾಲೋನಿ ಎಸ್ಎವಿ(ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ) ವೃತ್ತದಲ್ಲಿ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಗಮನ ಸೆಳೆಯಲು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪೆಂಡಾಲ್ ಒಳಭಾಗದಲ್ಲಿ ಕಾರ್ಖಾನೆಯ ವಿಹಂಗಮ ದೃಶ್ಯ, ಯಂತ್ರೋಪಕರಣಗಳು ಹಾಗು ಉತ್ಪಾದನೆ ಮತ್ತು ಕಚ್ಛಾ ವಸ್ತುಗಳ ಚಿತ್ರಣ ತೆರೆದಿಡಲಾಗಿದೆ. ನೋಡುಗರ ಗಮನ ಸೆಳೆಯುತ್ತಿದ್ದು, ಕಾರ್ಖಾನೆಯ ಇತಿಹಾಸದ ವೈಭವ ಮರುಕಳುಹಿಸಬೇಕೆಂಬ ಆಶಯ ಇದಾಗಿದೆ. ಪ್ರಸ್ತುತ ಎದುರಾಗಿರುವ ಸಂಕಷ್ಟಗಳನ್ನು ವಿಘ್ನ ನಿವಾರಕ ಪರಿಹರಿಸುವ ನಂಬಿಕೆ ಭಕ್ತರದ್ದಾಗಿದೆ.
No comments:
Post a Comment