ಸೋಮವಾರ, ಸೆಪ್ಟೆಂಬರ್ 18, 2023

ಶಾಂತಿ ಸಾಮಿಲ್ ಮಾಲೀಕ ರಾಮಣ್ಣ ನಿಧನ

 


ರಾಮಣ್ಣ

   ಭದ್ರಾವತಿ: ನಗರದ ಹೊಳೆಹೊನ್ನೂರು ರಸ್ತೆಯ ಶಾಂತಿ ಸಾಮಿಲ್ ಮಾಲೀಕರಾದ ಜಿ.ರಾಮಣ್ಣ(69) ಸೋಮವಾರ ನಿಧನ ಹೊಂದಿದರು.

   ಪತ್ನಿ, ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

   ಇವರ ಅಂತ್ಯಸಂಸ್ಕಾರ ಮಂಗಳವಾರ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

  ಇವರ ನಿಧನಕ್ಕೆ ತಮಿಳು ಸಮಾಜದ ಮುಖಂಡರು, ಗಣ್ಯರು, ಸಂತಾಪ ಸೂಚಿಸಿದ್ದಾರೆ.

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ