Tuesday, October 24, 2023

ಹಿರಿಯ ಪತ್ರಕರ್ತ ನಿಟ್ಟೂರು ಶ್ರೀರಾಮ್ ನಿಧನ

ನಿಟ್ಟೂರು ಶ್ರೀರಾಮ್      
    ಭದ್ರಾವತಿ: ನಗರದ ಲೋಯರ್ ಹುತ್ತಾ ನಿವಾಸಿ, ಹಿರಿಯ ಪತ್ರಕರ್ತ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉದ್ಯೋಗಿ ನಿಟ್ಟೂರು ಶ್ರೀರಾಮ್ (೭೯) ಮಂಗಳವಾರ ಸಂಜೆ ನಿಧನರಾದರು.
  ಪತ್ನಿ ಮನೋನ್ಮಣಿ ಶ್ರೀರಾಮ್, ಇಬ್ಬರು ಸೋದರರು ಇದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ೫ ದಶಕಗಳ ಕಾಲ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಏಜೆಂಟರಾಗಿ, ಹಲವಾರು ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ ಅಪ್ಪರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
    ಸಂತಾಪ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಮಾಜಿ ಅಧ್ಯಕ್ಷ ಎನ್.ಬಾಬು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಬಸವರಾಜ್, ಕೂಡ್ಲಿಗೆರೆ ಮಂಜುನಾಥ್, ಅನಂತಕುಮಾರ್, ಶಿವಶಂಕರ್, ಗಣೇಶ್‌ರಾವ್ ಸಿಂದ್ಯಾ, ಟಿ.ಎಸ್ ಆನಂದ್‌ಕುಮಾರ್, ಸುಭಾಷ್‌ರಾವ್ ಸಿಂದ್ಯಾ, ಸುಧೀಂದ್ರ, ಶಂಕರ್, ಸುದರ್ಶನ್, ಶೈಲೇಶ್ ಕೋಠಿ, ಸಯೀದ್ ಖಾನ್, ಕಿರಣ್, ಮಹಾಲಿಂಗಪ್ಪ ಸೇರಿದಂತೆ ಸಂತಾಪ ಸೂಚಿಸಿದರು.

No comments:

Post a Comment