Wednesday, November 6, 2024

ವಿಕಲಚೇತನರೊಂದಿಗೆ ಹಟ್ಟುಹಬ್ಬ ಆಚರಣೆ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಅಂಧ ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಯಿತು. ಸಾಮಾಜಿಕ ಸೇವೆ ಪ್ರಮುಖ ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್‌ನಲ್ಲಿ ದಂಪತಿ ತೊಡಗಿಸಿಕೊಂಡಿದ್ದು, ಪುತ್ರಿ ನಿರಾಲಿ ಹುಟ್ಟುಹಬ್ಬ ಸಮಾಜಕ್ಕೆ ಮಾದರಿಯಾಗಬೇಕೆಂಬ ಆಶಯ ವ್ಯಕ್ತಪಡಿಸಲಾಯಿತು. 
    ಲಯನ್ಸ್ ಪ್ರಮುಖರಾದ ರಾಮಸ್ವಾಮಿ ನಾಯ್ಡು, ಶಿವಕುಮಾರ್, ರಾಜಕುಮಾರ್, ಹೆಬ್ಬಂಡಿ ನಾಗರಾಜ್, ಆರ್. ಉಮೇಶ್, ಶ್ರೀನಿವಾಸ್, ಮಂಜುನಾಥ್,  ವಿಶ್ವನಾಥ್, ಎಂ.ಎಸ್ ಮಂಜುನಾಥ್,  ಡಾರತಿ, ನಿರ್ಮಲ, ಸವಿತಾ ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ  ಹಾಗು  ಬಿ.ಆರ್ ಪ್ರಾಜೆಕ್ಟ್ ಲಯನ್ಸ್  ಕ್ಲಬ್  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 

No comments:

Post a Comment