ಶುಕ್ರವಾರ, ನವೆಂಬರ್ 29, 2024

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ : ಯುವ ಘಟಕಕ್ಕೆ ಆನಂದ್, ಮಹಿಳಾ ಘಟಕಕ್ಕೆ ಸಾಕಮ್ಮ

ಕರ್ನಾಟಕ ರಾಜ್ಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಯುವಕ ಘಟಕದ ಅಧ್ಯಕ್ಷರಾಗಿ ಕಡದಕಟ್ಟೆ ನಿವಾಸಿ ಆನಂದ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ಅರಹತೊಳಲು ಗ್ರಾಮದ ನಿವಾಸಿ ಸಾಕಮ್ಮ ಮಹೇಶ್ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಯುವಕ ಘಟಕದ ಅಧ್ಯಕ್ಷರಾಗಿ ಕಡದಕಟ್ಟೆ ನಿವಾಸಿ ಆನಂದ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ಅರಹತೊಳಲು ಗ್ರಾಮದ ನಿವಾಸಿ ಸಾಕಮ್ಮ ಮಹೇಶ್ ಆಯ್ಕೆಯಾಗಿದ್ದಾರೆ. 
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. 
    ನಿರ್ದೇಶಕರಾದ ಪ್ರೇಮ್ ಕುಮಾರ್, ಎಚ್.ಎಂ ರವಿಕುಮಾರ್, ಎಸ್.ಆರ್ ರಾಜು, ದೇವರಾಜ್ ಪಟೇಲ್, ಆರ್.ಎಸ್ ಶೋಭಾ, ಎಸ್.ಸಿ ಉಷಾ, ಎಚ್.ಎಸ್ ರೂಪ, ವೇದ ಶಿವಮೂರ್ತಿ, ಕಾವೇರಮ್ಮ, ಮಂಜುನಾಥ್, ಕೆ.ಪಿ ಕಿರಣ್ ಕುಮಾರ್, ಎಚ್.ಪಿ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ