ಭದ್ರಾವತಿ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮ ಸೋಮವಾರ ಜರುಗಿತು
ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ ಶಿವಶಂಕರ್-ಎಂ. ಚಂದ್ರಕಲಾ ದಂಪತಿ ಪುತ್ರ ಎಚ್.ಎಸ್ ಶ್ರೀನಾಗ್ ರವರ ವಿವಾಹ ಮಹೋತ್ಸವ ಡಿ.೨೨ರ ಭಾನುವಾರ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಾಗರಾಜ ಮಡಿವಾಳರ-ರೇಣುಕಾ ದಂಪತಿ ಪುತ್ರಿ ಸುಜಾತ ಅವರೊಂದಿಗೆ ಹೊಳಲು ಗ್ರಾಮದಲ್ಲಿ ನೆರವೇರಿತು.
ಸೋಮವಾರ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಚಿದೇವ ಮಡಿವಾಳರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಕುಟುಂಬ ವರ್ಗದವರು, ಬಂಧ-ಮಿತ್ರರು, ಜನಪ್ರತಿನಿಧಿಗಳು ಪಾಲ್ಗೊಂಡು ನೂತನ ದಂಪತಿಗೆ ಶುಭ ಕೋರಿದರು.
No comments:
Post a Comment