Saturday, January 18, 2025

ಕಾರು-ಟ್ರ್ಯಾಕ್ಟರ್ ನಡುವೆ ಅಪಘಾತ

ವೈದ್ಯಕೀಯ ವಿದ್ಯಾರ್ಥಿನಿ ಸಾವು 


ಭದ್ರಾವತಿ ತಾಲೂಕಿನ  ಬಾರಂದೂರು ಬಳಿ ಬೈಪಾಸ್  ರಾಷ್ಟ್ರೀಯ ಹೆದ್ದಾರಿಯಲ್ಲಿ   ಶನಿವಾರ  ಕಾರು ಮತ್ತು ಟ್ರ್ಯಾಕ್ಟರ್  ಭೀಕರ  ಅಪಘಾತ ಸಂಭವಿಸಿದೆ.
    ಭದ್ರಾವತಿ: ತಾಲೂಕಿನ  ಬಾರಂದೂರು ಬಳಿ ಬೈಪಾಸ್  ರಾಷ್ಟ್ರೀಯ ಹೆದ್ದಾರಿಯಲ್ಲಿ   ಶನಿವಾರ  ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ  ನಡೆದಿದೆ. 
    ಮೃತ ವಿದ್ಯಾರ್ಥಿನಿಯನ್ನು ಕೃತಿ(21) ಎಂದು ಗುರುತಿಸಲಾಗಿದೆ.  ಕಾರು ಮತ್ತು  ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ.


    ತರೀಕೆರೆ  ಅಮೃತಾಪುರ ನಿವಾಸಿಯಾದ ಕೃತಿ   ಶಿವಮೊಗ್ಗ  ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ  ವೈದ್ಯಕೀಯ ಶಿಕ್ಷಣ (ಎಂಬಿಬಿಎಸ್) ವ್ಯಾಸಂಗ ಮಾಡುತ್ತಿದ್ದರು  ಎಂದು ತಿಳಿದು ಬಂದಿದೆ.
   ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಅಲ್ಲದೆ  ಕಾರು ಮತ್ತು ಟ್ರ್ಯಾಕ್ಟರ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಪೇಪರ್ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

No comments:

Post a Comment