Sunday, January 19, 2025

ಕುವೆಂಪು ವಿ.ವಿ ವಿದ್ಯಾ ವಿಷಯಕ ಪರಿಷತ್‌ಗೆ ಡಾ. ಎಸ್.ಪಿ ರಾಕೇಶ್ ನಾಮನಿರ್ದೇಶನ

ಡಾ.ಎಸ್.ಪಿ ರಾಕೇಶ್ 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್‌ರವರನ್ನು ಎರಡು ವರ್ಷಗಳ ಅವಧಿಗೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನಗೊಳಿಸಲಾಗಿದೆ. 
    ರಾಕೇಶ್‌ರವರು ಹಲವಾರು ವರ್ಷಗಳಿಂದ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿವಿಧ ಕಾಲೇಜುಗಳ ಒಟ್ಟು ೧೦ ಮಂದಿ ಪ್ರಾಂಶುಪಾಲರನ್ನು ೨ ವರ್ಷಗಳ ಅವಧಿಗೆ ಕುಲಪತಿಗಳು ನಾಮನಿರ್ದೇಶನಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ. 
    ಈ ಪೈಕಿ ಡಾ. ಎಸ್.ಪಿ ರಾಕೇಶ್ ಸಹ ಒಬ್ಬರಾಗಿದ್ದು, ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ, ವಿದ್ಯಾ ಸಂಸ್ಥೆಯ ಪ್ರಧಾನ ಪೋಷಕ ಸಿ.ಎಸ್ ಷಡಕ್ಷರಿ, ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗೂ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು,  ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

No comments:

Post a Comment