ಕೆ. ಸತ್ಯನಾರಾಯಣ
ಭದ್ರಾವತಿ: ನಗರದ ಹೊಸಮನೆ ನೃಪತುಂಗ ನಗರದ ೨ನೇ ಕ್ರಾಸ್ ನಿವಾಸಿ ಕೆ.ಸತ್ಯನಾರಾಯಣ(೯೫) ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಮೃತದೇಹ ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.
ಮೃತರಿಗೆ ೫ ಜನ ಮಕ್ಕಳಿದ್ದು, ಇವರ ಕೊನೆಯ ಆಸೆಯಂತೆ ಇವರ ಕಣ್ಣುಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗು ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಕುಟುಂಬಸ್ಥರು ದಾನ ಮಾಡಿದ್ದಾರೆ. ಸತ್ಯನಾರಾಯಣರವರು ಬಲಿಜ ಸಮಾಜದ ಮುಖಂಡರಾಗಿದ್ದು, ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment