Friday, February 21, 2025

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ : ಆರೋಪಿ ಕಾಲಿಗೆ ಗುಂಡು

ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ 
    ಭದ್ರಾವತಿ :  ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೋರ್ವನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ನಡೆದಿದೆ. 
    ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ ಬಂಧಿಸಲು ತೆರಳಿದ್ದಾಗ ಈತ ಪೊಲೀಸ್ ಸಿಬ್ಬಂದಿ(ಕಾನ್ಸ್‌ಸ್ಟೇಬಲ್) ಆದರ್ಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಠಾಣೆ ಉಪ ನಿರೀಕ್ಷಕ ಕೃಷ್ಣ ಕುಮಾರ್ ಮಾನೆ  ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ಆರೋಪಿ ಗುಂಡಾ ಮತ್ತು ಹಲ್ಲೆಗೊಳಗಾಗಿರುವ ಪೊಲೀಸ್ ಸಿಬ್ಬಂದಿ ಆದರ್ಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಂಡಾ ವಿರುದ್ಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ೩೦೭ ಸೆಕ್ಷನ್ ಅಡಿ ೪ ಪ್ರಕರಣಗಳು ದಾಖಲಾಗಿವೆ. 

No comments:

Post a Comment