ಎಂ.ಆರ್ ಸುರೇಶ್ ನಾಯಕ್
ಭದ್ರಾವತಿ : ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಶಿವಮೊಗ್ಗ ಅಂಜನಾಪುರ ಗ್ರಾಮದ ಎಂ.ಆರ್ ಸುರೇಶ್ ನಾಯಕ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.
ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಪ್ರಜ್ವಲ್ ಸ್ವಾಮಿರವರ ಆದೇಶದ ಮೇರೆಗೆ ಎಂ.ಆರ್ ಸುರೇಶ್ ನಾಯಕ್ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಹಾಸಭಾ ಮತ್ತಷ್ಟು ಸಂಘಟಿಸುವ ಮೂಲಕ ಸಮುದಾಯ ಏಳಿಗೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
No comments:
Post a Comment