Thursday, April 3, 2025

ಸಂಗೀತ ತರಬೇತಿ ಶಿಬಿರ ಉದ್ಘಾಟನೆ

ಭದ್ರಾವತಿ ಹಳೇ ನಗರದ ಮಹಿಳಾ ಸೇವಾ ಸಮಾಜದಲ್ಲಿ ಏರ್ಪಡಿಸಿದ್ದ ಸಂಗೀತ ತರಬೇತಿ ಶಿಬಿರವನ್ನು ಆಕಾಶವಾಣಿಯ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆಯವತಿಯಿಂದ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಆಯೋಜಿಸಲಾಗಿರುವ ಸಂಗೀತ ತರಬೇತಿ ಶಿಬಿರ ಆಕಾಶವಾಣಿ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ತಾಲೂಕು ಜಂಗಮ ಸಂಘದ ಅಧ್ಯಕ್ಷ ಎಸ್. ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು.  ಕಲಾವಿದ ಬಿ.ಕೆ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೀ ಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ನರಹರಿ ದೀಕ್ಷಿತ್ ಮಂಚಾಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
    ವೇದಿಕೆಯಲ್ಲಿ ಸೀಮಾ ಮಂಗೋಟೆ ರುದ್ರೇಶ್, ಶೋಭಾ, ಸುನಂದ, ಜ್ಯೋತಿ, ಡಾ. ವೀಣಾಭಟ್, ಎಚ್.ಮಲ್ಲಿಕಾರ್ಜುನ್, ಜಿ.ವಿ ಸದಾಶಿವಪ್ಪ, ಲೋಲಾಕ್ಷಿ, ಶಾಮಾಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

No comments:

Post a Comment