Thursday, April 3, 2025

ಸರೋಜಮ್ಮ ನಿಧನ

ಸರೋಜಮ್ಮ
ಭದ್ರಾವತಿ: ಜನ್ನಾಪುರ ನಿವಾಸಿ ದಿವಂಗತ ಮಲ್ಲೇಶಪ್ಪನವರ ಧರ್ಮಪತ್ನಿ, ೧೯೮೩ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸರೋಜಮ್ಮ(೮೦) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. 
    ಪುತ್ರ ಆಟೋ ಚಾಲಕ ಶಂಕರ ಮೂರ್ತಿ ಹಾಗು ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ಸರೋಜಮ್ಮ ವಯೋ ಸಹಜವಾಗಿ ನಿಧನರಾಗಿದ್ದು, ಆಟೋ ಚಾಲಕರು, ಸ್ಥಳೀಯ ಮುಖಂಡರು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬಿ.ಎಚ್ ರಸ್ತೆ, ಅಪ್ಪರ್‌ಹುತ್ತಾ (ಕವಲಗುಂದಿ) ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. 

No comments:

Post a Comment