Tuesday, July 1, 2025

ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    ಭದ್ರಾವತಿ : ನಗರಸಭೆ ವತಿಯಿಂದ ೨೦೨೫-೨೬ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯಡಿ ಶೇ.೭.೨೫ ಹಾಗು ಶೇ.೫ರ ಕ್ರಿಯಾ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಇತರೆ ಬಡವರ್ಗದವರಿಗೆ(ಮಾರಾಣಾಂತಿಕ ಕಾಯಿಲೆ) ಹಾಗು ವಿಕಲಚೇತನರಿಗೆ(ಶ್ರವಣ ಸಾಧನ, ವೀಲ್‌ಛೇರ್, ವಾಕರ್ ಖರೀದಿಸಲು ಸಹಾಯಧನ) ಶೇ.೭.೨೫ ಹಾಗು ಶೇ.೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. 
    ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯೊಂದಿಗೆ ಎರಡು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ೫ ವರ್ಷದೊಳಗಿನ ಜಾತಿ ಪ್ರಮಾಣ ಪತ್ರ, ಜಾಲ್ತಿ ಸಾಲಿನ ವಾರ್ಷಿಕ ವರಮಾನ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ,  ತರಬೇತಿ ಪ್ರಮಾಣ ಪತ್ರ, ಪಡಿತರ ಚೀಟಿಯ ನಕಲು ಪ್ರತಿ ಮತ್ತು ನಿವಾಸಿ ದೃಢೀಕರಣ ಪತ್ರಗಳ ನಕಲು ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಸಲ್ಲಿಸ ತಕ್ಕದ್ದು. 
    ಜು.೧೧ರೊಳಗೆ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿ ನಗರಸಭೆ ಶೇ.೨೪.೧೦ರ ನಿಧಿ ವಿಭಾಗದಿಂದ ಪಡೆಯಬಹುದಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. 

No comments:

Post a Comment