ಮಂಗಳವಾರ, ಆಗಸ್ಟ್ 5, 2025

ಬಿಜೆಪಿ ನಗರ, ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.  
       ನಗರ ಮಂಡಲ ಅಧ್ಯಕ್ಷರಾಗಿ ೪ನೇ ಬಾರಿಗೆ ಜಿ. ಧರ್ಮಪ್ರಸಾದ್ ಮುಂದುವರೆದಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಸುಲೋಚನ ಪ್ರಕಾಶ್, ಎಚ್.ಎಸ್ ಸುಬ್ರಮಣ್ಯ, ರವಿಚಂದ್ರನ್, ಶ್ರೀನಾಥ್ ಆಚಾರಿ, ಕೃಷ್ಣಮೂರ್ತಿ(ಕಿಟ್ಟಿ) ಮತ್ತು ಯೋಗೇಶ್ ಗುಜ್ಜಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್. ಚನ್ನೇಶ್ ೩ನೇ ಬಾರಿಗೆ ಮುಂದುವರೆದಿದ್ದು, ಹೊಸದಾಗಿ ರಘುರಾವ್ ಸೇರ್ಪಡೆಗೊಂಡಿದ್ದಾರೆ. 
    ಕಾರ್ಯದರ್ಶಿಗಳಾಗಿ ಸಾಗರ್, ಆರ್.ಪಿ ವೆಂಕಟೇಶ್, ಕವಿತಾ ರಾವ್, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ ಮತ್ತು ಧನುಷ್ ಬೋಸ್ಲೆ ಹಾಗು ಖಜಾಂಚಿಯಾಗಿ ಸಂಪತ್ ರಾಜ್ ಬಾಂಟಿಯ ೯ನೇ ಬಾರಿಗೆ ನೇಮಕಗೊಂಡಿದ್ದು, ಮಾಧ್ಯಮ್ ಪ್ರಮುಖರಾಗಿ ಕಾ.ರಾ ನಾಗರಾಜ್, ಸಾಮಾಜಿಕ ಜಾಲ ತಾಣಕ್ಕೆ ಪ್ರೇಮ ಮಂಜುನಾಥ್ ನೇಮಿಸಲಾಗಿದೆ. 


ಭದ್ರಾವತಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ. 
    ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆ.ಎಚ್ ತೀರ್ಥಯ್ಯ ನೇಮಕಗೊಂಡಿದ್ದು, ಉಪಾಧ್ಯಕ್ಷರಾಗಿ ಶಿವಾನಂದ ಮೂರ್ತಿ, ಕೆ.ಟಿ ಪ್ರಸನ್ನ, ಪಿ. ರಂಗಸ್ವಾಮಿ, ಗಣಪತಿಭಟ್ಟರು, ಗೌರಮ್ಮ ಮತ್ತು ಕೆ.ಎಚ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ಅಣ್ಣಪ್ಪ ಮತ್ತು ಹನುಂತನಾಯ್ಕ ಎರಡನೇ ಬಾರಿಗೆ ಮುಂದುವರೆದಿದ್ದಾರೆ. ಕಾರ್ಯದರ್ಶಿಗಳಾಗಿ ಎಂ.ಬಿ ವಿಶ್ವನಾಥ್, ಲೋಲಾಕ್ಷಿ ರಾಜಗುರು, ಎನ್. ದಿವ್ಯಾದರ್ಶ, ಟಿ.ಜೆ ರಾಕೇಶ್, ಆರ್. ದೀಪಕ್ ಮತ್ತು ಜೆ.ಬಿ ರುದ್ರೇಶ್, ಖಜಾಂಚಿಯಾಗಿ ಸಚಿನ್ ಛಾಯಾಪತಿ ನೇಮಕವಾಗಿದ್ದಾರೆ.

1 ಕಾಮೆಂಟ್‌: