ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಭದ್ರಾವತಿಯಲ್ಲಿ ಮಂಗಳವಾರ ಬಸ್ಗಳ ಸಂಚಾರ ಕಂಡು ಬಂದಿತು. ಈ ನಡುವೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡು ಬಂದರು.
ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಗರದಲ್ಲಿ ಮಂಗಳವಾರ ಬಸ್ಗಳ ಸಂಚಾರ ಕಂಡು ಬಂದಿತು. ಈ ನಡುವೆ ಕೆಲವು ನೌಕರರು ಕರ್ತವ್ಯ ಹಾಜರಾಗಿದ್ದು, ಉಳಿದಂತೆ ಬಹುತೇಕ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಶಿವಮೊಗ್ಗ-ಭದ್ರಾವತಿ ನಡುವಿನ ಬಸ್ ಸಂಚಾರ ಎಂದಿನಂತೆ ಕಂಡು ಬಂದಿತು. ಆದರೆ ವೇಗದೂತ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ದೂರದ ಊರುಗಳಿಂದ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಮಾತ್ರ ನಿಲ್ದಾಣಗಳಲ್ಲಿ ಕಂಡು ಬಂದರು.
ನಗರದ ಸಾರಿಗೆ ಘಟಕದಲ್ಲಿ ಸುಮಾರು ೫೦ ರಿಂದ ೬೦ ಬಸ್ಗಳಿದ್ದು, ಪ್ರತಿದಿನ ಸುಮಾರು ೪೦-೪೫ ಬಸ್ಗಳು ಸೂಚಿತ ಮಾರ್ಗಗಳಲ್ಲಿ ಸಂಚರಿಸುತ್ತವೆ. ಮುಷ್ಕರದಿಂದಾಗಿ ಕೆಲವೇ ಕೆಲವು ಬಸ್ಗಳು ಸಂಚಾರ ಆರಂಭಿಸಿವೆ. ಉಳಿದಂತೆ ಖಾಸಗಿ ಬಸ್ಗಳ ಸಂಚಾರ ಎಂದಿನಂತೆ ಕಂಡು ಬಂದಿತು. ಬುಧವಾರ ಮುಷ್ಕರದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ