ಭದ್ರಾವತಿ, ಏ. ೧: ಈ ಬಾರಿ ತಾಲೂಕಿನಲ್ಲಿ ಒಟ್ಟು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಒಟ್ಟು ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ಈ ಪೈಕಿ ೫ ಕ್ಷೇತ್ರಗಳನ್ನು ಹೊರತುಪಡಿಸಿ ೧೪ ಕ್ಷೇತ್ರಗಳನ್ನು ನಿಗದಿಪಡಿಸಿದೆ. ಈ ಪ್ರಕಾರ ಆನವೇರಿ, ಸಿದ್ದರಹಳ್ಳಿ ಇಟ್ಟಿಗೆಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ(ಅರಿಶಿನಘಟ್ಟ ತಾಂಡ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದ್ರಿಹಳ್ಳಿ ಮತ್ತು ದಿಗ್ಗೇನಹಳ್ಳಿ ಒಳಗೊಂಡಂತೆ ಆನವೇರಿ ಕ್ಷೇತ್ರ ಹಾಗು ಮೈದೊಳಲು, ಅಗರದಹಳ್ಳಿ, ಹಂಚಿನಸಿದ್ದಾಪುರ, ಬಸವಾಪುರ, ಭದ್ರಾಪುರ, ಹಾರೋಗುಂಡಿ, ಮಲ್ಲಿಗೇನಹಳ್ಳಿ, ಗುಡುಮಘಟ್ಟ, ತಡಸ, ಜಂಮರಹಳ್ಳಿ ಮತ್ತು ಕಲ್ಲಜ್ಜನಹಾಳ್ ಒಳಗೊಂಡಂತೆ ಅಗರದಹಳ್ಳಿ ಕ್ಷೇತ್ರವನ್ನು ರಚಿಸಲಾಗಿದೆ.
ಮಂಗೋಟೆ, ನಾಗಸಮುದ್ರ, ಸಿದ್ಲಿಪುರ, ಸನ್ಯಾಸಿಕೋಡಮಗ್ಗೆ, ಕನಸಿನಕಟ್ಟೆ ಮತ್ತು ಮಲ್ಲಾಪುರ ಒಳಗೊಂಡಂತೆ ಸನ್ಯಾಸಿಕೋಡಮಗ್ಗೆ ಕ್ಷೇತ್ರವನ್ನು, ಯಡೇಹಳ್ಳಿ, ಹನುಮಂತಾಪುರ, ಚಂದನಕೆರೆ, ಕಂಗನಾಳು ಮತ್ತು ಅರಹತೊಳಲು ಸೇರಿದಂತೆ ಯಡೇಹಳ್ಳಿ ಕ್ಷೇತ್ರವನ್ನು, ಕಲ್ಲಿಹಾಳ್, ದೊಂಬರಭೈರನಹಳ್ಳಿ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರದೊಟ್ಲು, ತಿಮ್ಲಾಪುರ ಒಳಗೊಂಡಂತೆ ತಟ್ಟೆಹಳ್ಳಿ ಕ್ಷೇತ್ರವನ್ನು, ಅರಬಿಳಚಿ, ದಾನವಾಡಿ, ಅರಕೆರೆ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು ಮತ್ತು ಬೊಮ್ಮನಕಟ್ಟೆ ಒಳಗೊಂಡಂತೆ ಅರಬಿಳಚಿ ಕ್ಷೇತ್ರವನ್ನು ಹಾಗು ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಟದಾಳು, ನವಿಲೆಬಸವಾಪುರ, ಹಾಳುಮಲ್ಲಾಪುರ, ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ, ನಾಗತಿಬೆಳಗಲು, ಹೊಸಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ ಮತ್ತು ತಡಸ ಒಳಗೊಂಡಂತೆ ತಡಸ ಕ್ಷೇತ್ರವನ್ನು ರಚಿಸಲಾಗಿದೆ.
ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲೆಕೆರೆ, ದೇವರಹಳ್ಳಿ, ವೀರಾಪುರ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಕಾಗೇಕೋಡಮಗ್ಗೆ, ಬಾಬಳ್ಳಿ, ತಿಪ್ಲಾಪುರ ಮತ್ತು ತಳ್ಳಿಕಟ್ಟೆ ಒಳಗೊಂಡಂತೆ ಅರಳಿಹಳ್ಳಿ ಕ್ಷೇತ್ರವನ್ನು, ಅಂತರಗಂಗೆ, ಕಾಚಗೊಂಡನಹಳ್ಳಿ, ದೇವರನರಸೀಪುರ, ಉಕ್ಕುಂದ, ಕೆಂಚಮ್ಮನಹಳ್ಳಿ, ಬಂಡಿಗುಡ್ಡ, ಬೆಳ್ಳಿಗೆರೆ, ಬದನೆಹಾಳ್, ನೆಟ್ಟಕಲ್ಲಹಟ್ಟಿ, ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬಿಸಿಲಮನೆ, ಬಾಳೆಕಟ್ಟೆ, ಸಿದ್ದರಹಳ್ಳಿ, ಮಳಲಹರವು, ವರವಿನಕೆರೆ, ಕೊರಲಕೊಪ್ಪ ಮತ್ತು ಗುಣಿನರಸೀಪುರ ಒಳಗೊಂಡಂತೆ ಅಂತರಗಂಗೆ ಕ್ಷೇತ್ರವನ್ನು, ಮಾವಿನಕೆರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಕಾಳಿಂಗನಹಳ್ಳಿ, ಬಾರಂದೂರು, ಹಳ್ಳಿಕೆರೆ ಮತ್ತು ಯರೇಹಳ್ಳಿ ಒಳಗೊಂಡಂತೆ ಯರೇಹಳ್ಳಿ ಕ್ಷೇತ್ರವನ್ನು ಹಾಗು ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ, ಕಾರೇಹಳ್ಳಿ ಮತ್ತು ಬೊಮ್ಮೇನಹಳ್ಳಿ ಒಳಗೊಂಡಂತೆ ಹಿರಿಯೂರು ಕ್ಷೇತ್ರವನ್ನು ರಚಿಸಲಾಗಿದೆ.
ಕಲ್ಲಹಳ್ಳಿ, ಮಜ್ಜಿಗೇನಹಳ್ಳಿ, ಬಿಳಿಕಿ, ಸಿರಿಯೂರು, ಹಾಗಲಮನೆ, ಸೋಮೇನಕೊಪ್ಪ, ಹಳಿಯಾರು ರಾಮೇನಕೊಪ್ಪ, ಸಂಕ್ಲೀಪುರ, ವೀರಾಪುರ, ಕಂಬದಾಳು ಹೊಸೂರು, ಹೊನ್ನೆಹಟ್ಟಿ, ಹುಣಸೇಕಟ್ಟೆ, ತಮ್ಮಡೀಹಳ್ಳಿ ಮತ್ತು ಕಾಳನಕಟ್ಟೆ ಒಳಗೊಂಡಂತೆ ಹುಣಸೇಕಟ್ಟೆ ಕ್ಷೇತ್ರವನ್ನು, ಸಿಂಗನಮನೆ, ವದಿಯೂರು, ತಾವರಘಟ್ಟ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ ಮತ್ತು ಮಾಳೇನಹಳ್ಳಿ ಒಳಗೊಂಡಂತೆ ಸಿಂಗನಮನೆ ಕ್ಷೇತ್ರವನ್ನು ಹಾಗು ದೊಣಬಘಟ್ಟ, ಪದ್ಮೇನಹಳ್ಳಿ, ಕೊಪ್ಪದಾಳು, ನವಿಲೇಬಸವಾಪುರ ಮತ್ತು ಹೊಳೆನೇರಲೆಕೆರೆ ಒಳಗೊಂಡಂತೆ ದೊಣಬಘಟ್ಟ ಕ್ಷೇತ್ರವನ್ನು ರಚಿಸಲಾಗಿದೆ.