ಸಣ್ಣದೇವಯ್ಯ
ಭದ್ರಾವತಿ, ಡಿ. ೧೬: ಎಂಪಿಎಂ ನಿವೃತ್ತ ಉದ್ಯೋಗಿ, ಪ್ರೊ. ಬಿ. ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತ ಸಣ್ಣದೇವಯ್ಯ(೭೫) ಗುರುವಾರ ನಿಧನ ಹೊಂದಿದರು.
ನಗರಸಭೆ ವಾರ್ಡ್ ನಂ.೧೪ರ ಹೊಸಮನೆ ನೃಪತುಂಗ ನಗರದಲ್ಲಿ ವಾಸವಾಗಿದ್ದ ಸಣ್ಣದೇವಯ್ಯನವರು ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ಅಧ್ಯಕ್ಷೆ, ಪುತ್ರಿ ಎಸ್. ಉಮಾ ಸೇರಿದಂತೆ ಎರಡು ಹೆಣ್ಣು ಹಾಗು ಎರಡು ಗಂಡು ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿ ನೆರವೇರಲಿದೆ.
ಸಣ್ಣದೇವಯ್ಯ ದಲಿತ ಚಳುವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಶೋಷಿತರು, ಬಡ ವರ್ಗದವರ ಹೋರಾಟದ ಧ್ವನಿಯಾಗಿದ್ದರು. ಜಾತಿರಹಿತ ಸಮಾಜ ನಿರ್ಮಾಣ ಮಾಡುವ ಮೂಲಕ ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಪರಿಕಲ್ಪನೆ ಹೊಂದಿದ್ದರು.
ಇವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟ, ಛಲವಾದಿ ಮಹಾಸಭಾ ಸೇರಿದಂತೆ ಇನ್ನಿತರ ಸಂಘಟನೆಗಳು ಸಂತಾಪ ಸೂಚಿಸಿವೆ.