Tuesday, July 18, 2023

ಸರ್ಕಾರಿ ಶಾಲಾ ಮಕ್ಕಳಿಗೆ ಟೈ, ಬೆಲ್ಟ್‌, ನೋಟ್‌ಬುಕ್‌ವಿತರಣೆ

ಭದ್ರಾವತಿ  ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಭದ್ರಾವತಿ, ಜು. ೧೮ : ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಬಿವಿಐ ಅಧ್ಯಕ್ಷ ಡಿ.ಎ ರಾಕೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲೆಕ್ಟೆಡ್ ಪ್ರೆಸಿಡೆಂಟ್ ಅಮಿತ್ ಗುಜ್ಜರ್‌ರವರ ಪ್ರಾಯೋಜತ್ವದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಗುತ್ತಿದೆ. ಇದೆ ರೀತಿ ಚೈಲ್ಡ್‌ವೆಲ್ಪೇರ್‌ಡೈರೆಕ್ಟರ್‌ಅನಿತಾ ಪ್ರದೀಪ್‌ಗುಜ್ಜರ್‌ಪ್ರಾಯೋಜತ್ವದಲ್ಲಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಭಾನುವಾರ ಇವರ ಪ್ರಾಯೋಜತ್ವದಲ್ಲಿ ಸಿಂಪಲ್‌ಟೆಕ್ನಿಕ್ವೆ ಫಾರ್‌ಲರ್ನಿಂಗ್‌ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
    ಕಾರ್ಯಕ್ರಮದಲ್ಲಿ ರಾಮ ರಾವ್ , ಆನಂದ್ ಉತ್ತರಕರ, ಅನಿತಾ ಗುಜ್ಜರ್,  ರೇಖಾ ಹರೀಶ್ ಸೇರಿದಂತೆ ಬಿವಿಐ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಬಸವಂತ್ ರಾವ್ ದಾಳೆ ವಂದಿಸಿದರು.

ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವ ಮುಖ್ಯ : ಚಲನಚಿತ್ರ ನಟ ಸುಂದರ್‌ ರಾಜ್‌

ಭದ್ರಾವತಿಯಲ್ಲಿಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ  ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ  ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಅವರಿಗೆ ಡಾ.ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಭದ್ರಾವತಿ, ಜು. ೧೮ : ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು, ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗುತ್ತೇವೆ ಎಂದು ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಹೇಳಿದರು.
    ಅವರು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಜೀವನದಲ್ಲಿ ತಂದೆ-ತಾಯಿ, ಗುರುಗಳು, ನೆರೆಹೊರೆಯವರ ಆಶೀರ್ವಾದೊಂದಿಗೆ ಮುನ್ನಡೆಯಬೇಕು. ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಹಂಚಿ ಸಹಬಾಳ್ವೆ ಮೂಲಕ ರಾಗ ದ್ವೇಷ ಕಿತ್ತೊಗೆದಾಗ ಸಮಾಜದ ಅಭಿವೃಧ್ಧಿ ಆಗುತ್ತದೆ. ಧರ್ಮ ನಂಬಿ, ಜಾತಿ ನಂಬಬೇಡಿ. ಮನುಷ್ಯತ್ವ, ಮಾನವೀಯತೆಯ ಕಳಕಳಿ ಬೆಳೆಸಿಕೊಳ್ಳಿ ಎಂದರು.
    ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್  ಮಾತನಾಡಿ, ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿದ್ದಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಆತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದರು.
    ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಾಜುಗೌಡ ಹಾಗು ಶ್ರೀಧರ್ ಮಾತನಾಡಿ, ವಿಷ್ಣುವರ್ಧನ್ ನಿಧನರಾಗಿ ಹಲವು ವರ್ಷಗಳು ಕಳೆದರೂ ಸಹ ಅವರ ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ.  ಇದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ರೀತಿಯ ಅಗತ್ಯ ಕ್ರಮ ಕೈಗಳ್ಳುತ್ತಿಲ್ಲ. ಅಭಿಮಾನ್ ಸ್ಟುಡಿಯೋದವರು ಅವರ ಸಮಾಧಿ ಸ್ಥಳದಲ್ಲಿ ೧೦ ಗುಂಟೆ ಜಾಗ ನೀಡಿದ್ದರು. ಆದರೆ ನಂತರ ಇದರ ಬಗ್ಗೆ ವಾದ ವಿವಾದ ಉಂಟಾಗಿ, ಈಗ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಇದರ ಬಗ್ಗೆ ವಿಷ್ಣು ಸೇನಾ ಸಮಿತಿಯಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ ಕಲಾ ಭವನ ಇದೆ, ಅಂಬರೀಷ್ ಕಲಾ ಭವನ ಇದೆ. ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಕಲಾ ಭವನ ಇಲ್ಲ. ಸ್ಮಾರಕನೂ ಇಲ್ಲ. ಆದ್ದರಿಂದ ಇನ್ನಾದರೂ ಇದರ ಬಗ್ಗೆ ಕಾರ್ಯ ಪ್ರವೃತರಾಗ ಬೇಕು. ಇದರ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಲಾಗುತ್ತಿದೆ ಎಂದರು.
    ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಗಾಯಕ ಸುಬ್ರಮಣ್ಯ ಕೆ. ಐಯ್ಯರ್, ಅರ್ಜುನ್, ರಾಧಾ ಗಂಗಾಧರ್, ಆನಂದ ರಾಜ್, ರಘು, ತುಳಸಿಕೃಷ್ಣ, ವಸಂತ ಆರ್ ಮಾಧವ, ಹರೀಶ್ ಗೌಡ, ಶರಾವತಿ, ಯದುನಂದನ್ ಗೌಡ, ಎಸ್. ಮಂಜುನಾಥ್‌ರವರುಗಳಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ವೀರಕಪುತ್ರ ಶ್ರೀನಿವಾಸ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಮಣಿಶೇಖರ್, ಶ್ರೀಧರ್, ಎಂ. ಶ್ರೀನಿವಾಸ್, ಕೋಕಿಲ, ಬನಶಂಕರಿ, ರಾಧಾ, ವೈ.ಕೆ ಹನುಮಂತಯ್ಯ, ಕವಿತಾ ರಾವ್, ರವಿ, ನಟರಾಜ್‌, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚನ್ನಪ್ಪ ಸ್ವಾಗತಿಸಿ, ಅರಳಿಹಳ್ಳಿ ಅಣ್ಣಪ್ಪ ನಿರೂಪಿಸಿದರು.

Monday, July 17, 2023

ಮದ್ಯ ಸೇವಿಸಿ ವಾಹನ ಚಾಲನೆ : ೫ ಮಂದಿಗೆ ದಂಡ

    ಭದ್ರಾವತಿ, ಜು. ೧೭ : ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಮೂಲಕ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ೫ ಮಂದಿಗೆ ನ್ಯಾಯಾಲಯ ದಂಡ ವಿಧಿಸಿರುವ ಘಟನೆ ನಡೆದಿದೆ.
    ನಗರದಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿ ವಾರಾಂತ್ಯ ದಿನಗಳಲ್ಲಿ ಸಂಚಾರಿ ಪೊಲೀಸ್‌ ಠಾಣೆವತಿಯಿಂದ ವಿಶೇಷ ಕಾರ್ಯಾಚರಣೆ ನಡೆಸಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.
    ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ೧ನೇ ಎಸಿಜೆ ನ್ಯಾಯಾಲಯದ ನ್ಯಾಯಾಧೀಶರು ತಲಾ ಒಬ್ಬರಿಗೆ ೧೦,೦೦೦ ರು. ದಂಡ ವಿಧಿಸಿದ್ದು, ಒಟ್ಟು ೫೦,೦೦೦ ರು. ದಂಡ ವಿಧಿಸಲಾಗಿದೆ. 

ಕರ್ನಾಟಕ ರೈತ ಸುರಕ್ಷಾ ಫಸಲ್ ಭಿಮಾ ಯೋಜನೆ : ಸದ್ಬಳಕೆಗೆ ರೈತರಿಗೆ ಮನವಿ

    ಭದ್ರಾವತಿ, ಜು. ೧೭ : ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಗ್ರಿಕಲ್ಟರ್‌ ಇನ್‌ಶೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಫಸಲ್ ಭಿಮಾ ಯೋಜನೆ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಲು  ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.
    ಹೋಬಳಿ ಮಟ್ಟದಲ್ಲಿ ರಾಗಿ (ಮಳೆ ಆಶ್ರಿತ ), ಗ್ರಾಮ ಪಂಚಾಯತಿ ಮಟ್ಟದಲ್ಲಿ ಭತ್ತ (ನೀರಾವರಿ) ಮತ್ತು ಮುಸುಕಿನ ಜೋಳ (ಮಳೆ ಆಶ್ರಿತ) ಈ ಯೋಜನೆ ವ್ಯಾಪ್ತಿಯಲ್ಲಿ ಬರಲಿವೆ.  ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ, ರೈತರು ಪಾವತಿಸಬೇಕಾದ ವಿಮಾ ಮೊತ್ತ ಮತ್ತು ಬೆಳೆ ವಿಮೆಗೆ ನೋಂದಾಯಿಸಲು ಅಂತಿಮ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ.

ಬೊಮ್ಮನಕಟ್ಟೆಯಲ್ಲಿ ಕೆರೆ ತೆರವು ಕಾರ್ಯಾಚರಣೆ

ಭದ್ರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ   ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
    ಭದ್ರಾವತಿ, ಜು. ೧೭: ಕಳೆದ ಕೆಲವು ದಿನಗಳಿಂದ ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
    ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್‌ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೊಮ್ಮನಕಟ್ಟೆ ಸರ್ವೆ ನಂ. ೩೩ರ ಕೆರೆ ಒತ್ತುವರಿ ನಡೆಸಿತು.
    ಕಳೆದ ವಾರ ಸಿದ್ದಾಪುರ ಕಸಬಾ ಹೋಬಳಿ ಸಂಕ್ಲಿಪುರ  ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ  ಹಾಗು ಬೊಮ್ಮನಕಟ್ಟೆ ಸರ್ವೆ ನಂ.೧ರ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
    ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಹಂತ ಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ಕೆ.ಪಿ ಪ್ರಾರ್ಥನಾಗೆ ಸೀಸನ್‌-೧ ಜ್ಯೂನಿಯರ್‌ ಕಪ್‌

ಶಿವಮೊಗ್ಗ ಪೋದರ್‌ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ .
    ಭದ್ರಾವತಿ, ಜು. ೧೭ : ಶಿವಮೊಗ್ಗ ಪೋದರ್‌ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಸ್ಮಶ್‌ ಐಟಿ ಸಹಕಾರದೊಂದಿಗೆ ಶಿವಮೊಗ್ಗ ಗೋಪಾಲದಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಸೀಸನ್‌-೧ ಜ್ಯೂನಿಯರ್‌ ಕಪ್‌ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
  ಕೆ.ಪಿ ಪಾರ್ಥನಾ ನಗರಸಭೆ ಕಿರಿಯ ಅಭಿಯಂತರ ಪ್ರಸಾದ್‌ ಅವರ ಪುತ್ರಿಯಾಗಿದ್ದು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಅಭಿನಂದಿಸಿದ್ದಾರೆ.

Sunday, July 16, 2023

ಕಾರ್ಪೆಂಟರ್‌ ಶಂಕರ್‌ ನಿಧನ

ಕಾರ್ಪೆಂಟರ್‌ ಶಂಕರ್‌
    ಭದ್ರಾವತಿ, ಜು. ೧೬: ನಗರಸಭೆ ವ್ಯಾಪ್ತಿ ಜನ್ನಾಪುರ ಗಣೇಶ್‌ ಕಾಲೋನಿ ನಿವಾಸಿ, ಕಾರ್ಪೆಂಟರ್‌ ಶಂಕರ್‌(೫೦) ಭಾನುವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರು ಹಲವಾರು ವರ್ಷಗಳಿಂದ ಕಾರ್ಪೆಂಟರ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಬುಳ್ಳಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.