ಭದ್ರಾವತಿ ನ್ಯೂಟೌನ್ ಸರ್ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭದ್ರಾವತಿ, ಜು. ೨೭: ನಗರದ ನ್ಯೂಟೌನ್ ಸರ್ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆಯನೂರಿನಲ್ಲಿ ಜರುಗಿದ ೨ ದಿನಗಳ ಕುವೆಂಪು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಕಾಲೇಜಿನ ಒಟ್ಟು ೨೨ ವಿದ್ಯಾರ್ಥಿಗಳು ಭಾಗಹಸಿದ್ದು, ಯಶ್ವಂತ್ (79 ಕೆ.ಜಿ ವಿಭಾಗದಲ್ಲಿ) ಚಿನ್ನದ ಪದಕ, ಪವನ್ (125 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ, ಮನು ಮಂತೋರೆ (92 ಕೆಜಿ ವಿಭಾಗದಲ್ಲಿ) , ಸೈಯದ್ ಕುರ್ ( 65 ಕೆ.ಜಿ ವಿಭಾಗದಲ್ಲಿ), ಸಾಹಿಲ್ ಸಾಬ್ (97 ಕೆಜಿ
ವಿಭಾಗದಲ್ಲಿ) ಮತ್ತು ಅಮೀನ್ ಉಲ್ಲಾ ಹುಸೇನ್ ( 97+ ಅಧಿಕ ಕೆಜಿ ವಿಭಾಗದಲ್ಲಿ) ಕಂಚಿನ ಪದಕ
ಪಡೆದುಕೊಂಡು ಕೀರ್ತಿ ತಂದಿದ್ದಾರೆ.
ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್.ಹೊಸ ಳ್ಳೇರ್ ಹಾಗೂ ಡಾ. ಬಿ.ಎಂ ನಾಸಿರ್ ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್ ಶಿವರುದ್ರಪ್ಪ ಮತ್ತು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶಫಿ, ಎಲ್. ಯೋಗೇಶ್, ದೇವರಾಜ, ಜಿ.ಎನ್ ಅರಸ್, ಪಿ. ಎ ದಿಲೀಪ್ ಮತ್ತು ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.