Saturday, September 16, 2023

ಅ.1ರಂದು ಸರ್ವ ಸದಸ್ಯರ ವಿಶೇಷ ಸಭೆ

ಬಿ. ಸಿದ್ದಬಸಪ್ಪ


    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಸಭೆ ಅ.1ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಸಂಘದ ತಾಲೂಕಿನ ಸದಸ್ಯರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೆ ಸಹಕರಿಸುವಂತೆ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಕೋರಿದ್ದಾರೆ.

    ಸಂಘದ ಬೈಲಾ ಉಪವಿಧಿಗಳು-2022ರ ಕೆಲವು ಉಪವಿಧಿಗಳಿಗೆ ತಿದ್ದುಪಡಿ ತರಲು ಸಂಘದ ಮಹಾಸಭೆಯನ್ನು ವಾಸ್ತವ/ವರ್ಚುವಲ್ ವಿಧಾನದ ಮೂಲಕ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿರವರ ಅಧ್ಯಕ್ಷತೆಯಲ್ಲಿ ಅ.1ರಂದು ಕರೆಯಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಹಿರೇಸಿಂದೋಗಿ ರಸ್ತೆಯ ಮಹಾವೀರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಲಿದ್ದು, ತಾಲೂಕಿನ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

    ವರ್ಚವಲ್ ವೇದಿಕೆ ಮೂಲಕ ಭಾಗವಹಿಸಲು ಸದಸ್ಯರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, https:/bit.ly/ksgeasplgbm ಲಿಂಕ್ ಅನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಘದ ವ್ಯವಸ್ಥಾಪಕ ರಾಜು. ಆರ್(ಕುಮಾರ್) ಮೊ: 9481406239 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಬಿ. ಸಿದ್ದಬಸಪ್ಪ ತಿಳಿಸಿದ್ದಾರೆ.

ಡಿಎಸ್ಎಸ್ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ಭದ್ರಾವತಿ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ನಗರದ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ಸಮಿತಿಯ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಮುಖಂಡರಾದ ಎಸ್.ಎನ್.ಶಿವಪ್ಪ, ಟಿ.ರುದ್ರೇಶ್, ಶಿವಪಾಟೀಲ್, ನವೀನ್ ಕುಮಾರ್, ನರಸಿಂಹ, ಎಸ್. ಜಮೀರ್ ಉಪಸ್ಥಿತರಿದ್ದರು.


ಸೆ.19ರಂದು ಸರ್ವ ಸದಸ್ಯರ ಸಭೆ


    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ 91ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.19ರ ಮಂಗಳವಾರ ನಡೆಯಲಿದೆ.

    ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು, ಸೊಸೈಟಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೊಸೈಟಿ ಕಾರ್ಯದರ್ಶಿ ಕೋರಿದ್ದಾರೆ.

ಸೆ.20ರಂದು ರಕ್ತದಾನ, ನೇತ್ರ ತಪಾಸಣೆ ಶಿಬಿರ


    ಭದ್ರಾವತಿ: ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಬಿ ಆರ್ ಪಿ ಲಯನ್ಸ್ ಕ್ಲಬ್, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗು ಸಿಂಗನ ಮನೆ ಗ್ರಾಮ ಪಂಚಾಯಿತಿ ವತಿಯಿಂದ ಸೆ.20ರಂದು ಉಚಿತ ನೇತ್ರ ತಪಾಸಣೆ,  ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ  ಅಳವಡಿಕೆ ಶಿಬಿರ ಆಯೋಜಿಸಲಾಗಿದೆ.

    ಬಿ ಆರ್ ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದೆ.

     ಅಲ್ಲದೆ ಬಿ ಆರ್ ಪಿ ಒಕ್ಕಲಿಗರ ಸಂಘದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಶ್ರೀನಿವಾಸ್, ಅಧ್ಯಕ್ಷರು, ಲಯನ್ಸ್ ಕ್ಲಬ್, ಮೊ: 9008742213, ಡಾ. ನವೀನ್ ನಾಗರಾಜ್ ಕೆ, ಕಾರ್ಯದರ್ಶಿ, ಮೊ: 6361316722, ಮಂಟಲಿಂಗಯ್ಯ, ಖಜಾಂಚಿ, ಮೊ: 8088381801 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Sunday, September 10, 2023

ಶಾರದಮ್ಮ ನಿಧನ


ಶಾರದಮ್ಮ 
ಭದ್ರಾವತಿ: ನಗರದ ರಂಗಪ್ಪ ವೃತ್ತದ ಸರ್ಕಲ್ ಸ್ವೀಟ್ಸ್ ಸತೀಶ್ ಐಯರ್ ರವರ ತಾಯಿ ಶಾರದಮ್ಮ (79) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.
 ರಾತ್ರಿ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು. ಶಾರದಮ್ಮ ಮಣಿ ಐಯರ್ ರವರ ಧರ್ಮಪತ್ನಿಯಾಗಿದ್ದು, ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.



ಸೆ.11ರಂದು ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ: ಕಂದಾಯ ಜಾಗದಲ್ಲಿ ಅನಧಿಕೃತವಾಗಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಿಸುತ್ತಿರುವುದನ್ನು ತಡೆಯುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸಾರ್ವಜನಿಕರ ಹಿತರಕ್ಷಣಾ ವೇದಿಕೆ ಮತ್ತು ಆದಿಜಾಂಭವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.11ರಂದು ಬೆಳಿಗ್ಗೆ 10.30ರಿಂದ ನಗರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
  ಸಿದ್ದರೂಢನಗರ, ವಾರ್ಡ್ ನಂ.6ರ 1ನೇ ಕ್ರಾಸ್‌ನಲ್ಲಿರುವ ಸಿದ್ದರೂಢ ಮಠದ ಹಿಂಭಾಗದಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೆ ನಗರಸಭೆಯ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ
ಕಂದಾಯ ಜಾಗದಲ್ಲಿ ಅನಧಿಕೃತವಾಗಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಿಸುತ್ತಿದ್ದು, ಆ ನಿವೇಶನಕ್ಕೆ
ಸಂಬಂಧಪಟ್ಟಂತೆ ನಗರಸಭೆಯಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಕೂಡ ನಗರಸಭೆ ವತಿಯಿಂದ ಅವಕಾಶ ಮಾಡಿಕೊಡಲಾಗಿದೆ. .
 ಈ ಸಂಬಂಧ ಆ.31ರಂದು ನಗರಸಭೆ ಆಯುಕ್ತರಿಗೆ ಮತ್ತು ಸೆ. 1ರಂದು ಜಿಲ್ಲಾಧಿಕಾರಿಗೆ ದೂರನ್ನು ಸಲ್ಲಿಸಿದ್ದು ಹಾಗೂ ಸೆ.8ರಂದು ವಕೀಲರ ಮೂಲಕ ಅನಧಿಕೃತ ಕಟ್ಟಡ ತಡೆಹಿಡಿಯುವ ಬಗ್ಗೆ ನೋಟೀಸ್‌ನ್ನು ಸಹ ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಸೆ.11ರಿಂದ ಯೋಗ ತರಬೇತಿ


ಭದ್ರಾವತಿ : ಹಳೇನಗರ ಕನಕ ನಗರದ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ಗುರು ಡಿ.ನಾಗರಾಜ್ ಅವರಿಂದ ಸೆ.11 ರಿಂದ ನಿರಂತರವಾಗಿ ಯೋಗ, ದ್ಯಾನ , ಪ್ರಾಣಾಯಾಮ ತರಬೇತಿ ನಡೆಯಲಿದೆ.
     8 ರಿಂದ 80 ವರ್ಷದೊಳಗಿನವರು ತರಗತಿಗೆ ಸೇರಲು ಅವಕಾಶವಿರುತ್ತದೆ. 
    ಯೋಗದಿಂದ ಹಲವು ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಬೆನ್ನು ನೋವು, ಸೊಂಡ ನೋವು, ತಲೆ ನೋವು, ರಕ್ತದ ಒತ್ತಡ, ಸಕ್ಕರೆ ಖಾಯಿಲೆ, ಹೃದಯದ ತೊಂದರೆ, ಗ್ಯಾಸ್ಟ್ರಿಕ್ ಸೇರಿದಂತೆ ಇನ್ನು ಅನೇಕ ಖಾಯಿಲೆಗಳಿಗೆ ವಿಶೇಷ ಯೋಗ ತರಬೇತಿಯಿಂದ ಮುಕ್ತಿ ಹೊಂದಬಹುದಾಗಿದೆ. 
   ಉದ್ವೇಗ, ಭಯ, ಕೋಪ, ಚಂಚಲತೆ, ಮರವು, ಸದಾ ಚಟುವಟಿಕೆಯಿಂದ ಕೆಲಸ ಮಾಡಲು
ದಿನವಿಡಿ ಸಂತೋಷದಿಂದ, ನೆಮ್ಮದಿಯಿಂದ ಇರಲು ಯೋಗ ಸಹಕಾರಿಯಾಗಿದೆ.
    ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬೆಳಗ್ಗೆ 6 ರಿಂದ 7.15ರವರೆಗೆ ತರಬೇತಿ ನೀಡಲಾಗುವುದು.
   ಹೆಚ್ಚಿನ ವಿವರಗಳಿಗೆ ಯೋಗ ಗುರು ಡಿ ನಾಗರಾಜ್ ಹಾಗೂ ಶ್ರೀಮತಿ ಚಂದ್ರಕಲಾ ಮೊ  9449986209, 9916608787 ಸಂಪರ್ಕಿಸಬಹುದಾಗಿದೆ.