ಭದ್ರಾವತಿಯಲ್ಲಿ ರಥಸಪ್ತಮಿ ದಿನ ಬೆಳಗಿನಜಾವ ಮಂಜುಮುಸುಕಿದ ವಾತವರಣದಲ್ಲಿ ಭದ್ರಾನದಿಯಲ್ಲಿ ಹಳೇನಗರ ಭಾಗದ ನಿವಾಸಿಗಳು ಸಾಮೂಹಿಕವಾಗಿ ಮಾಘಮಾಸದ ಸ್ನಾನ ಮಾಡಿದರು.
ಭದ್ರಾವತಿ : ರಥಸಪ್ತಮಿ ದಿನ ಬೆಳಗಿನಜಾವ ಮಂಜುಮುಸುಕಿದ ವಾತವರಣದಲ್ಲಿ ಭದ್ರಾನದಿಯಲ್ಲಿ ಹಳೇನಗರ ಭಾಗದ ನಿವಾಸಿಗಳು ಸಾಮೂಹಿಕವಾಗಿ ಮಾಘಮಾಸದ ಸ್ನಾನ ಮಾಡಿದರು.
ಬೆಳಿಗ್ಗೆ ಹಳೇನಗರದ ಶ್ರೀವಾದಿರಾಜಸ್ವಾಮಿಗಳ, ಶ್ರೀರಾಘವೇಂದ್ರಸ್ವಾಮಿಗಳ ಶ್ರೀ ಮಠದಿಂದ ರಾಯರ ರಜತ ಪಾದುಕೆ ಹಿಡಿದು ಭದ್ರಾನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ಮಂಟಪದ ಸಮೀಪಕ್ಕೆ ತೆರಳಿದರು. ನಂತರ ನದಿಯಲ್ಲಿ ಪಂಡಿತ ಗೋಪಾಲಾಚಾರ್ರವರ ನೇತೃತ್ವದಲ್ಲಿ ಸಮೂಹಿಕ ಸಂಕಲ್ಪದೊಂದಿಗೆ ಗಂಗೆ, ಯಮುನೆ, ಸರಸ್ವತಿ, ಭದ್ರಾ, ತುಂಗಾ ಸೇರಿದಂತೆ ಸಮಸ್ತ ಪುಣ್ಯ ನದಿಗಳ ಸ್ಮರಣೆಮಾಡಿ ಸ್ನಾನ ಮಾಡಿದರು.
ಪಂಡಿತ ಗೋಪಾಲಚಾರ್ ಅವರ ಪೌರೋಹಿತ್ಯಾ ಹಾಗೂ ನೇತೃತ್ವದಲ್ಲಿ ಪುರುಷರು ದೇವತಾರ್ಘ್ಯ, ಸೂರ್ಯಾರ್ಘ್ಯ, ದೇವತರ್ಪಣ, ಋಷಿತರ್ಪಣ ಮತ್ತು ಪಿತೃತರ್ಪಣಗಳನ್ನು ಅರ್ಪಿಸಿದರು. ಮಹಿಳೆಯರು ಆರತಿ ಬೆಳಗಿ ಗಂಗಾಪೂಜೆ ನೆರವೇರಿಸಿದರು. ಉಳಿದಂತೆ ಅನೇಕರು ಶ್ರೀ ಸಂಗಮೇಶ್ವರ ಮಂಟಪದಲ್ಲಿರುವ ಗಣಪತಿ, ಶಿವಲಿಂಗ, ನಾಗದೇವತೆ, ನಂದಿಗೆ ಅಭಿಷೇಕ, ಪೂಜೆ ಸಲ್ಲಿಸಿದರು.
ಪಂಡಿತ ಶ್ರೀನಿವಾಸಾಚಾರ್, ಸತ್ಯನಾರಾಯಣಚಾರ್, ನಿರಂಜನಾಚಾರ್, ಜಿ. ರಮಾಕಾಂತ, ಜಯತೀರ್ಥ, ರಾಘವೇಂದ್ರಚಾರ್, ವೆಂಕಟೇಶ್, ಶೇಷಗಿರಿ, ಅನಿಲ, ಶ್ರೀಕರ, ಪ್ರಮೋದ, ರಾಘವೇಂದ್ರ ತಂತ್ರಿ, ಉಪಾಧ್ಯಾಯ, ಸುಮಾರಾಘವೇಂದ್ರ, ಶುಭಾಗುರುರಾಜ್, ಸುಜಾತ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.