Wednesday, July 26, 2023
ಮಕ್ಕಳಿಗೆ ಸೈನಿಕರ ಹೋರಾಟ, ಬದುಕು ತಿಳಿಯಲಿ : ಸುಬೇದಾರ್ ಗುಲ್ಗುಲೆ
ಅಣಬೆ ಕಡಿಮೆ ಜಾಗದಲ್ಲಿ ಅಧಿಕ ಲಾಭ ಗಳಿಸುವ ಬೆಳೆ : ರವಿಕುಮಾರ್
ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ : 4 ಅಂಗಡಿಗಳ ಮೇಲೆ ದಾಳಿ
Tuesday, July 25, 2023
ವಿಐಎಸ್ಎಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರಿಕೆಯಿಂದಿರಲು ಸೂಚನೆ
ಮುಜ್ಜು ಹತ್ಯೆ ಪ್ರಕರಣ : ೫ ಮಂದಿ ಬಂಧನ
ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ
ರೋಟರಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ
ಕೆ.ಎಸ್ಪ್ರಮೋದ್ಕುಮಾರ್ಗೆ ಡಾಕ್ಟರೇಟ್ಪದವಿ
ಕೆ.ಎಸ್ಪ್ರಮೋದ್ಕುಮಾರ್
ಭದ್ರಾವತಿ, ಜು. ೨೫ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ಜಿಲ್ಲಾ ಸಂಚಾಲಕ ನಗರದ ನಿವಾಸಿ ಕೆ.ಎಸ್ ಪ್ರಮೋದ್ ಕುಮಾರ್ ರವರು ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ಪದವಿ ಪಡೆದುಕೊಂಡಿದ್ದಾರೆ.
ಪ್ರಮೋದ್ಕುಮಾರ್ರವರು ʻʻಸೆಲ್ಫ್ಎಕ್ಸ್ಪ್ರೆಸನ್, ಸೋಸಿಯಲ್ಕಾಂಪೆಟೆನ್ಸ್, ಅಡ್ಜಸ್ಟ್ಮೆಂಟ್ ಅಂಡ್ ಅಕಾಡೆ ಮಿಕ್ ಆಚೀವ್ಮೆಂಟ್ ಆಸ್ ಪ್ರೆಡಿಕ್ಟರ್ಸ್ ಆಫ್ ಒಬೆಡಿಯನ್ಸ್-ಡಿಸ್ಒಬೆಡಿಯನ್ಸ್ಟೆನ್ಡೆನ್ಸಿ ಅಮಾಂಗ್ ಅಡೋಲ್ ಸೆಂಟ್ಸ್ʼʼ (Self Expression, Social Competence, Adjustment and Academic Achievement as Predictors of Obedience -Disobedience Tendency among Adolescents) ಮಹಾಪ್ರಬಂಧ ವಿಶ್ವ ವಿದ್ಯಾಲಯದ ಶಿಕ್ಷಣ ನಿಕಾಯದ ಡೀನರು ಪ್ರೊ. ಸಿ. ಗೀತಾರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.
ಪ್ರಮೋದ್ಕುಮಾರ್ವಿಶ್ವ ವಿದ್ಯಾಲಯದ ೩೩ನೇ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಇವರು ಈ ಹಿಂದೆ ಹೊಸಸೇತುವೆ ರಸ್ತೆಯ ಹೆಬ್ಬೂರು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕುವೆಂಪು ವಿಶ್ವ ವಿದ್ಯಾಲಯದ ಸಿಂಡಿಕೇಟ್ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರನ್ನು ಎಬಿವಿಪಿ ಪ್ರಮುಖರು, ಪ್ರಾಧ್ಯಾಪಕ ವೃಂದದವರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.