Wednesday, May 20, 2020

ಬಲಿಜ ಸಮಾಜದ ಕಡುಬಡವರಿಗೆ ಆರ್ಥಿಕ ನೆರವು ನೀಡಿ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ 

ಭದ್ರಾವತಿ, ಮೇ. ೨೦:  ಆರ್ಥಿಕವಾಗಿ ಹಿಂದುಳಿದ ಬಲಿಜ ಸಮಾಜದ ಕಡುಬಡವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
     ಸಮಾಜದವರು ಅರಿಶಿನ-ಕುಂಕುಮ, ಬಳೆ, ಹೂ ಮಾರಾಟ ಸೇರಿದಂತೆ ಸಣ್ಣ ಸಣ್ಣ ಕಸಬುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.  ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
      ಈಗಾಗಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಡುಬಡವರ ಸಂಕಷ್ಟಕ್ಕೆ ಸ್ಪಂದಿಸಿ ೫ ಸಾವಿರ ರು. ನೆರವು ಘೋಷಿಸಿದ್ದಾರೆ. ಇದೆ ರೀತಿಯಲ್ಲಿ  ಬಲಿಜ ಸಮಾಜದವರ ನೆರವಿಗೆ ಮುಂದಾಗುವಂತೆ ಕೋರಲಾಗಿದೆ.

No comments:

Post a Comment