Monday, September 7, 2020

ಮಾನವೀಯತೆ ಮೆರೆದ ಯುವಕರ ತಂಡ : ರಸ್ತೆ ಪಕ್ಕದಲ್ಲಿ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ಆರೈಕೆ

ಭದ್ರಾವತಿಯಲ್ಲಿ ರಸ್ತೆ ಪಕ್ಷದಲ್ಲಿ ಅಪಘಾತದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಯುವಕ ತಂಡವೊಂದು ಆರೈಕೆ ಮಾಡಿ ಮಾನವೀಯತೆ ಮೆರದಿದೆ.
ಭದ್ರಾವತಿ, ಸೆ. ೭: ರಸ್ತೆ ಪಕ್ಷದಲ್ಲಿ ಅಪಘಾತದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ನಗರದ ಯುವಕ ತಂಡವೊಂದು ಆರೈಕೆ ಮಾಡಿ ಮಾನವೀಯತೆ ಮೆರದಿದೆ.
    ನಗರದ ವಿಐಎಸ್‌ಎಲ್ ಕಾರ್ಖಾನೆ ಡಬ್ಬಲ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದುಗೊಂಡಿದ್ದು, ಬಹಳಷ್ಟು ಮಂದಿ ನೋಡಿದರೂ ನೋಡದವರಂತೆ ಸಂಚರಿಸುತ್ತಿದ್ದರು. ಈ ನಡುವೆ ಯುವಕರ ತಂಡವೊಂದು ಆ ವ್ಯಕ್ತಿಯನ್ನು ಗಮನಿಸಿ ಅಸ್ವಸ್ಥಗೊಂಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆ ವ್ಯಕ್ತಿಯ ಮೇಲಿದ್ದ ಕೊಳಕು ಬಟ್ಟೆಯನ್ನು ತೆಗೆದು ಸ್ನಾನ ಮಾಡಿಸಿ ಹೊಸ ಬಟ್ಟೆ, ಕುಡಿಯಲು ನೀರು ಆಹಾರ ನೀಡಿ ನಂತರ ಆತನನ್ನು ನಗರಸಭೆಯ ನಿಗರ್ತಿಕ ಕೇಂದ್ರಕ್ಕೆ ದಾಖಲಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಯಿತು.
      ಅಪರಿಚಿತ ವ್ಯಕ್ತಿ ಯಾರು ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ಯುವಕರ ತಂಡವೊಂದು ಮಾನವೀಯತೆ ಮೆರೆದಿರುವುದು ಗಮನ ಸೆಳೆಯುತ್ತಿದೆ.



No comments:

Post a Comment