Tuesday, January 19, 2021

ಕೇರಳ ಸಮಾಜಂ ಅಧ್ಯಕ್ಷರಾಗಿ ವಿಜಯಲಕ್ಷ್ಮಿ

ಭದ್ರಾವತಿ ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳು.
ಭದ್ರಾವತಿ, ಜ. ೧೯: ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ.
     ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಶೋಭ ಬಾಲಚಂದ್ರನ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಹೇಮಂತ ಕಲ್ಯಾಣಿ, ಸಹಕಾರ್ಯದರ್ಶಿಯಾಗಿ ರೇಖಾ ಚಂದ್ರನ್, ಖಜಾಂಚಿಯಾಗಿ ಎಂ. ಸೀತಾಲಕ್ಷ್ಮಿ, ಸಲಹೆಗಾರರಾಗಿ ಎಂ. ವಾಸಂತಿ ಹಾಗು ಸದಸ್ಯರಾಗಿ ಕೆ. ಶಶಿಕಲಾ ಸುರೇಶ್, ಶೈಲಜಾ ಸುರೇಶ್, ಕೆ. ಲೋಲಾಕ್ಷಿ, ಕೆ.ಎಸ್. ಯಶೋಧ, ಪ್ರೇಮಾ ವೇಲಾಯುಧನ್, ಸಿಂಧು ದಿವಾಕರ್ ಮತ್ತು ಸ್ವಾತಿ ರಜನೀಸ್ ಆಯ್ಕೆಯಾಗಿದ್ದಾರೆ.
   ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಸಹಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್, ಆರ್. ರಾಧಾಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment