ಕೆ.ಎಂ ಸತೀಶ್
ಭದ್ರಾವತಿ, ಜ. ೧೯: ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಕೆ.ಎಂ ಸತೀಶ್ ಪುನಃ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ. ಯಲ್ಲಪ್ಪ, ಕಾರ್ಯದರ್ಶಿಯಾಗಿ ಬಿ. ಚಂದ್ರಶೇಖರಯ್ಯ, ಸಹಕಾರ್ಯದರ್ಶಿಯಾಗಿ ಬಿ.ಎ ಚಂದ್ರಪ್ಪ, ಖಜಾಂಚಿಯಾಗಿ ಭದ್ರಯ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಪಿ.ಎನ್ ಚಂದ್ರಶೇಖರ್, ದೇವೇಂದ್ರಪ್ಪ, ಎ.ಬಿ ಭೀಮೋಜಿರಾವ್, ಜಿ.ಬಿ ಚಂದ್ರಶೇಖರ್, ಪಿ. ಶಿವನ್, ಚಾಂದು, ಎನ್. ಕೃಷ್ಣಪ್ಪ ಮತ್ತು ರುದ್ರೇಶ್ ಆಯ್ಕೆಯಾಗಿದ್ದಾರೆ.
ಎಂಪಿಎಂ ನಿವೃತ್ತ ಅಧಿಕಾರಿ ಹಾಗು ಹಿರಿಯ ನ್ಯಾಯಾವಾದಿಯಾಗಿರುವ ಕೆ.ಎಂ ಸತೀಶ್ ಕಳೆದ ಸುಮಾರು ೨೫ ವರ್ಷಗಳಿಂದ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
Thank you very much for giving importance to Tax payers Association news.
ReplyDeleteK M Satheesh