ಈಗಾಗಲೇ ಕೈಗೊಳ್ಳಲಾಗಿರುವ ಕೊರೋನಾ ಲಸಿಕಾ ಪೂರ್ವ ಸಿದ್ದತೆ ಪರಿಶೀಲನೆ(ಡ್ರೈ ರನ್)ಗೆ ಶನಿವಾರ ಭದ್ರಾವತಿ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಗಿದ್ದು, ಡ್ರೈ ರನ್ನಲ್ಲಿ ಪಾಲ್ಗೊಂಡಿರುವ ತಂಡ.
ಭದ್ರಾವತಿ, ಜ. ೨: ಈಗಾಗಲೇ ಕೈಗೊಳ್ಳಲಾಗಿರುವ ಕೊರೋನಾ ಲಸಿಕಾ ಪೂರ್ವ ಸಿದ್ದತೆ ಪರಿಶೀಲನೆ(ಡ್ರೈ ರನ್)ಗೆ ಶನಿವಾರ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.
ಕೊರೋನಾ ಲಸಿಕೆ ಲಭ್ಯವಾದ ನಂತರ ಲಸಿಕೆ ಹಾಕುವ ವಿಧಾನಗಳು, ಅನುಸರಿಸಬೇಕಾದ ಕ್ರಮಗಳು ಇತ್ಯಾದಿಗಳನ್ನು ವೈದ್ಯರು ಹಾಗೂ ಸಹಾಯಕರು ಮತ್ತು ಸುಮಾರು ೨೫ ಮಂದಿ ಆರೋಗ್ಯ ಇಲಾಖೆ ಕಾರ್ಯಕರ್ತರು ಸೇರಿದಂತೆ ೫೦ ಮಂದಿ ಕೇಂದ್ರದಲ್ಲಿ ಪೂರ್ವ ಸಿದ್ದತೆಗಳ ಪರಿಶೀಲನೆಯಲ್ಲಿ ಭಾಗಿಯಾಗಿದ್ದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ನಾಗರಾಜ್ನಾಯ್ಕ ತಂಡದ ನೇತೃತ್ವ ವಹಿಸಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಎಸ್ ಗಿರೀಶ್, ಡಾ. ಭರತ್, ಡಾ. ದಿನೇಶ್, ಇವಿಐಎನ್ ವ್ಯವಸ್ಥಾಪಕ ಸುದರ್ಶನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣ ವಿಭಾಗದ ಮೇಲ್ವಿಚಾರಕ ಗಜೇಂದ್ರ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment