ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಜ. ೩೧: ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
ಬಸವೇಶ್ವರ ವೃತ್ತವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಿ ಶಿಥಿಲಗೊಂಡಿರುವ ಪ್ರತಿಮೆಯನ್ನು ತೆರವುಗೊಳಿಸಿ ಹೊಸ ಪ್ರತಿಮೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಈ ಹಿನ್ನಲೆಯಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಪ್ರಮುಖರಾದ ಬಿ.ಎಸ್ ಗಣೇಶ್, ಪರಶುರಾಮ್, ಮಹೇಶ್, ರಾಜು, ರಮಾಕಾಂತ, ಹಾಲೇಶ್, ರವಿಕುಮಾರ್, ರೇವಣ್ಣ, ಗುರುರಾಜ್, ಶಿವಾನಂದ್, ಬಿ.ಪಿ ರಾಘವೇಂದ್ರ, ಅಣ್ಣೋಜಿರಾವ್, ಗುತ್ತಿಗೆದಾರ ಬಾಲಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment