ಭದ್ರಾವತಿ ನ್ಯೂಟೌನ್ ರಜತ ಮಹೋತ್ಸವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ಚಟುವಟಿಕೆಗಳಿಗೆ ಬೆಂಗಳೂರಿನ ಅಕ್ಷರ ದಾಸೋಹ ಆಯುಕ್ತರ ಕಛೇರಿಯ ಸಹನಿರ್ದೇಶಕ ಟಿ. ನಾರಾಯಣಗೌಡ ಚಾಲನೆ ನೀಡಿದರು.
ಭದ್ರಾವತಿ, ಮಾ. ೩: ನಗರದ ನ್ಯೂಟೌನ್ ರಜತ ಮಹೋತ್ಸವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಅಕ್ಷರ ದಾಸೋಹ ಆಯುಕ್ತರ ಕಛೇರಿಯ ಸಹನಿರ್ದೇಶಕ ಟಿ. ನಾರಾಯಣಗೌಡ ವಿಶೇಷವಾಗಿ ಆಯುರ್ವೇದಿಕ್ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕಲಿಕೆ ಜೊತೆಗೆ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು.
ದೈಹಿಕ ಶಿಕ್ಷಕ ಶಿವಲಿಂಗೇಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ ಹಾಗು ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಶಿವಮೊಗ್ಗ ಉದ್ಯಮಿ ಸಮೀರ್ ೮ನೇ ತರಗತಿ ಮಕ್ಕಳಿಗೆ ಕೊಡುಗೆಯಾಗಿ ಶಾಲಾ ಬ್ಯಾಗ್ಗಳನ್ನು ನೀಡಿದ್ದು, ಈ ಬ್ಯಾಗ್ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಉಪಪ್ರಾಚಾರ್ಯ ಕೆ.ಎಚ್ ಮೋಹನೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಮಹಾದೇವಿ ಪ್ರಾರ್ಥಿಸಿದರು. ಸಾವಿತ್ರಿ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಎನ್.ಕೆ ಪಾಲಾಕ್ಷಪ್ಪ ನಿರೂಪಿಸಿದರು. ಶಿಕ್ಷಕಿ ಛಾಯಶ್ಯಾಮಸುಂದರ್ ವಂದಿಸಿದರು.
No comments:
Post a Comment