ಮಂಗಳವಾರ, ಮಾರ್ಚ್ 2, 2021

ಮಹಿಳಾ ಸೇವಾ ಸಮಾಜದಿಂದ ದಾಸಶ್ರೇಷ್ಠರ ಆರಾಧನೆ

ಪ್ರತಿಭಾವಂತರಿಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ಪ್ರದಾನ



ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ದಾಸಶ್ರೇಷ್ಠರಾದ ಪುರಂದರದಾಸರು, ಕನಕದಾಸರು ಹಾಗು ತ್ಯಾಗರಾಜರ ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಪ್ರತಿಭಾವಂತರಿಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ಪ್ರದಾನ ಮಾಡಿ  ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨: ಪ್ರತಿವರ್ಷದಂತೆ ಈ ಬಾರಿ ಸಹ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ದಾಸಶ್ರೇಷ್ಠರಾದ ಪುರಂದರದಾಸರು, ಕನಕದಾಸರು ಹಾಗು ತ್ಯಾಗರಾಜರ ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
    ಸಂಗೀತ ಪರೀಕ್ಷೆ ಜ್ಯೂನಿಯರ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಂದನ, ಸೀನಿಯರ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಜಿ.ವಿ ಶಾಂತಲಾ, ವೀಣೆ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರಾವಣಿಯವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸುವ ಜೊತೆಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
   ಸಂಗೀತ ಶಿಕ್ಷಕಿಯರಾದ ವಸುಧಮುಕುಂದ್, ಪುಷ್ಪಸುಬ್ರಮಣ್ಯ, ಉಮಾರಾವ್ ಉಪಸ್ಥಿತರಿದ್ದರು. ಸೇವಾ ಸಮಾಜದ ಅಧ್ಯಕ್ಷೆ  ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
    ಪದಾಧಿಕಾರಿಗಳಾದ ಉಪಾಧ್ಯಕ್ಷೆ ಕಮಲಕುಮಾರಿ, ಕಾರ್ಯದರ್ಶಿ ಶೋಭಗಂಗರಾಜ್, ಖಜಾಂಚಿ ಜಯಂತಿಶೇಟ್, ಪ್ರಮುಖರಾದ ಶಕುಂತಲ, ಚಂದ್ರಲರಾಜ್, ಭಾಗ್ಯನಿಜಗುಣ, ಕಮಲರಾಯ್ಕರ್, ಇಂದಿರಾ ರಮೇಶ್, ಶಾರದ, ಅನ್ನಪೂರ್ಣ ಸತೀಶ್, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್, ಮಾಜಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ