Thursday, October 28, 2021

ಅ.೩೧ರಂದು ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ, ಸಮುದಾಯ ಭವನ ಲೋಕಾರ್ಪಣೆ

ಭದ್ರಾವತಿ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಲೋಕರ್ಪಣೆಗೊಳ್ಳಲಿರುವ ಅಗಮುಡಿ ಮೊದಲಿಯರ್ ಸಮುದಾಯ ಭವನ.
    ಭದ್ರಾವತಿ, ಅ. ೨೮: ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭ ಶ್ರೀ ಭದ್ರಗಿರಿ ದವತ್ತಿರು ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಅ.೩೧ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಬೆಂಗಳೂರಿನ ಐಎಂಪಿಎ ಸಂಸ್ಥಾಪಕ ಅಧ್ಯಕ್ಷ ಡಾ. ಆರ್. ಅರುಣಾಚಲಂ ಹಾಗು ತರೀಕೆರೆ ಎಂ.ಸಿ ಹಳ್ಳಿ ಶ್ರೀ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಸಂಘದ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ದಾನಿಗಳಾದ ಪಿ. ನೀಲಮೇಗಂ, ಡಾ. ಆರ್. ಅರುಣಾಚಲಂ, ಕೆ. ವಿಶ್ವನಾಥ್, ಆರ್.ಜಿ ಜ್ಯೋತಿ ಮೊದಲಿಯರ್ ಮತ್ತು ಜಿ. ಸುರೇಶ್‌ಕುಮಾರ್ ಹಾಗು ನೂತನ ನಗರಸಭಾ ಸದಸ್ಯರಾದ ಅಗಮುಡಿ ಸಮಾಜದ ಆರ್. ಕರುಣಾಮೂರ್ತಿ, ವಿ. ಕದಿರೇಶ್, ವಿಜಯ ಮತ್ತು ಸುದೀಪ್‌ಕುಮಾರ್ ಅವರಿಗೆ ಸನ್ಮಾನ ನಡೆಯಲಿದೆ.
    ಸಮಾಜ ಬಂಧುಗಳು, ಗಣ್ಯರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸುವಂತೆ ಸಂಘದ ಕಾರ್ಯದರ್ಶಿ ಪಿ. ದೊರೈ ಮತ್ತು ಖಜಾಂಚಿ ಎಂ. ಸುಬ್ರಮಣಿ ಕೋರಿದ್ದಾರೆ.

No comments:

Post a Comment