ಭದ್ರಾವತಿ ನ್ಯೂಟೌನ್ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಜೃಂಭಣೆಯಿಂದ ಜರುಗಿತು.
ಭದ್ರಾವತಿ, ಜ. ೧೯: ನ್ಯೂಟೌನ್ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಜೃಂಭಣೆಯಿಂದ ಜರುಗಿತು.
ಶ್ರೀ ಕೃಷ್ಣ ಜನ್ಮಾಷ್ಠಮಿ ಸಂದೇಶ ನೀಡಿದ ವಿಶ್ವ ವಿದ್ಯಾಲಯದ ಸಂಚಾಲಕರಾದ ಬ್ರಹ್ಮಾ ಕುಮಾರಿ ಮಾಲಾ ಅಕ್ಕ, ಭಗವಾನ್ ಶ್ರೀಕೃಷ್ಣನ ಶ್ರೇಷ್ಠತೆಗೆ ಕಾರಣಗಳನ್ನು ವಿವರಿಸಿ ಸಣ್ಣ ಕಥೆಯ ಮೂಲಕ ಕೊಳಲು ಹೇಗೆ ಶ್ರೀ ಕೃಷ್ಣನ ಜೊತೆ ಸದಾ ಇರುತ್ತದೆಯೋ ಹಾಗೆ ನಾವು ಸಹ ಪರಮಾತ್ಮನೊಂದಿಗೆ ಸದಾ ಇರಬೇಕೆಂಬ ನೀತಿಯನ್ನು ತಿಳಿಸಿಕೊಟ್ಟರು.
ನಗರದ ಪ್ರಧಾನ ಅಂಚೆ ಕಛೇರಿ ಪೋಸ್ಟ್ ಮಾಸ್ಟರ್ ಆಶಾ ಜೆ. ಪ್ರಭು, ಅಂಚೆ ನೌಕರ ನಿತ್ಯಾನಂದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಾಧೆ ಮತ್ತು ಶ್ರೀ ಕೃಷ್ಣನ ವೇಷಭೂಷಣದೊಂದಿಗೆ ಮಕ್ಕಳು ಕಣ್ಮನ ಸೆಳೆದರು. ವಿಶ್ವ ವಿದ್ಯಾಲಯದ ಸೇವಾಕರ್ತರು, ಭಕ್ತರು ಪಾಲ್ಗೊಂಡಿದ್ದರು. ಮಹಾಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
No comments:
Post a Comment