ಭದ್ರಾವತಿ ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಭದ್ರಾವತಿ, ಆ. ೩೦: ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಪೆನ್ಸಿಲ್ ತುದಿಯಲ್ಲಿ ಸುಮಾರು ೦.೫ ಎಂ.ಎಂ ಎತ್ತರದ ಅತಿಸೂಕ್ಷ್ಮವಾದ ಗಣೇಶ ಮಾದರಿಯನ್ನು ಕೇವಲ ೨ ಗಂಟೆ ೨.೫ ನಿಮಿಷದಲ್ಲಿ ತಯಾರಿಸಿದ್ದಾರೆ. ವರುಣ್ ಅವರು ಈಗಾಗಲೇ ಅಕ್ಕಿ ಕಾಳು, ಸೀಮೆ ಸುಣ್ಣ, ಪೆನ್ಸಿಲ್ ಸೇರಿದಂತೆ ಅತಿ ಸೂಕ್ಷ್ಮ ವಸ್ತುಗಳನ್ನು ಬಳಸಿ ಹಲವಾರು ಸೂಕ್ಷ್ಮ ಕಲಾ ಮಾದರಿಗಳನ್ನು ತಯಾರಿಸಿದ್ದು, ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಸಾಧನೆ ಸಹ ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
No comments:
Post a Comment